ಪುತ್ತೂರು: ಸಂಪ್ಯ ಮರಕ್ಕ ವರದಾಯಿನಿ ಶ್ರೀವ್ಯಾಘ್ರಚಾಮುಂಡಿ ಸಾನಿಧ್ಯದ ವತಿಯಿಂದ ಮೇ.10ರಂದು ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯಲಿರುವ ಚತುರ್ಪವಿತ್ರ ನಾಗಮಂಡಲೋತ್ಸವ ಸೇವೆಯಗೆ ನಾಗಮಂಟಪದ ಚಪ್ಪರ ಮುಹೂರ್ತವು ಮಾ.21ರಂದು ನೆರವೇರಿತು.
ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ನ್ಯಾಯವಾದಿ ಚಿದಾನಂದ ಬೈಲಾಡಿ, ನಾಗಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬನ್ನೂರು, ಕಾರ್ಯಾಧ್ಯಕ್ಷರಾದ ನರೇಂದ್ರನಾಥ ನಾಯಕ್ ಮರಕ್ಕ ಹಾಗೂ ರಕ್ಷಿತ್ ನಾಯಕ್ ಮರಕ್ಕ, ಮಂಜಪ್ಪ ರೈ ಬಾರಿಕೆ, ಅಶೋಕ ಗೌಡ, ಧನಂಜಯ ಶೆಟ್ಟಿ ಮೇರ್ಲ, ರಾಘವೇಂದ್ರ ಶೆಟ್ಟಿ ಮೇರ್ಲ, ಲೋಕೇಶ್ ರೈ ಮೇರ್ಲ ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.