ಪುತ್ತೂರು:ಅಟೋ ರಿಕ್ಷಾವೊಂದಕ್ಕೆ ಗೂಡ್ಸ್ ಆಪೆ ರಿಕ್ಷಾವೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ ೩೪ ನೆಕ್ಕಿಲಾಡಿಯ ಬೇರಿಕೆ ಎಂಬಲ್ಲಿ ಮಾ.೨೩ರಂದು ನಡೆದಿದೆ.
ಉಪ್ಪಿನಂಗಡಿಗೆ ಹೋಗುತ್ತಿದ್ದ ಗೂಡ್ಸ್ ಆಪೆ ರಿಕ್ಷಾ ೩೪ ನೆಕ್ಕಿಲಾಡಿ ಬೇರಿಕೆ ಬಳಿ ಆದರ್ಶ ನಗರದಿಂದ ಬೇರಿಕೆ ಕಡೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾದಲ್ಲಿದ್ದ ಅಪ್ಸರ್ ಮತ್ತು ಪ್ರಯಾಣಿಕ ಅಬೀದ್ ಅವರು ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಘಾತದ ಬಳಿಕ ಗೂಡ್ಸ್ ಆಪೆ ವಾಹನ ಚಾಲಕ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸದೇ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿರುವುದಾಗಿ ಪ್ರಕರಣ ದಾಖಲಾಗಿದೆ.