ಪುತ್ತೂರು:ಬೆದ್ರಾಳದಲ್ಲಿ ಎದುರಿನಿಂದ ಬರುತ್ತಿದ್ದ ತಂದೆ, ಮಗಳಿದ್ದ ಸ್ಕೂಟರ್ ಹಾಗೂ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಸ್ಕೂಟರೊಂದು ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಮಾ.೨೪ರಂದು ನಡೆದಿದೆ. ಪ್ರಶಾಂತ್ ಕುಮಾರ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಬೆದ್ರಾಳ ಸಮೀಪ ರಸ್ತೆ ಬದಿ ನಿಂತಿದ್ದ ನರಿಮೊಗರು ಉಪ್ಪಳ ನಿವಾಸಿ ಮರಿಯನ್ ಮಸ್ಕರೇನಸ್(65ವ) ಅವರಿಗೆ ಡಿಕ್ಕಿಯಾಯಿತಲ್ಲದೆ, ಅದೇ ಸಂದರ್ಭ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಇನ್ನೊಂದು ಸ್ಕೂಟರ್ಗೂ ಡಿಕ್ಕಿಯಾಗಿದೆ.ಪರಿಣಾಮ ಮರಿಯನ್ ಮಸ್ಕರೇನಸ್ ಮತ್ತು ಇನ್ನೊಂದು ಸ್ಕೂಟರ್ನಲ್ಲಿದ್ದ ನರಿಮೊಗರು ಗ್ರಾಮದ ಶಾಂತರಾಮ ನಾಯಕ್ ಮತ್ತು ಅವರ ಪುತ್ರಿ ಅಮೂಲ್ಯ ಅವರಿಗೆ ಗಾಯವಾಗಿದೆ.ಗಂಭೀರ ಗಾಯಗೊಂಡ ಮರಿಯನ್ ಮಸ್ಕರೇಸನ್ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ