ಕಾವು ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ-ದರ್ಶನ ಬಲಿ

0

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಾ.26ರಂದು ಶ್ರೀದೇವರ ದೊಡ್ಡ ದರ್ಶನ ಬಲಿ ವಿಜೃಂಭಣೆಯಿಂದ ನಡೆಯಿತು.

 

ಬೆಳಿಗ್ಗೆ ಉತ್ಸವ ಬಲಿ ಹೊರಟು, ದೊಡ್ಡ ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕಾವು ಕ್ಷೇತ್ರದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಸಮಿತಿ ಸದಸ್ಯರುಗಳಾದ ಭಾಸ್ಕರ ಬಲ್ಯಾಯ, ರಾಮಚಂದ್ರ ಭಟ್ ಮಳಿ, ಕೃಷ್ಣಪ್ರಸಾದ್ ಕೊಚ್ಚಿ, ಧನಂಜಯ ನಾಯ್ಕ, ಹೊನ್ನಪ್ಪ ಪೂಜಾರಿ, ಪ್ರೇಮಾ ಗಂಗಾಧರ ಚಾಕೋಟೆ, ನಿರ್ಮಲಾ ರೈ, ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ ಸೇರಿದಂತೆ ಊರ-ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here