ಪುತ್ತೂರು : ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಪುಳಿತ್ತಡಿ ಸಮೀಪವಿರುವ ರತ್ನ ಸಂಕೀರ್ಣದಲ್ಲಿ, ಗಂಗಾಧರ್ ಹಿರಿಂಜ ಹಳೇನೆರೆಂಕಿ ಹಾಗೂ ವಸಂತ್ ಉಪ್ಪಿನಂಗಡಿ ಇವರ ಪಾಲುದಾರಿಕೆಯಲ್ಲಿ ಹೊಸ ಆಡಳಿತದೊಂದಿಗೆ, ಅತ್ಯಾಧುನಿಕ ಸಲಕರಣೆಯ ಜೊತೆಗೆ ನುರಿತ ಕಾರ್ಮಿಕ ವರ್ಗವನ್ನೊಳಗೊಂಡಿರುವ, ಮಾರುತಿ ಸುಜ್ಹುಕಿ ಕಾರುಗಳ ಎಲ್ಲಾ ರೀತಿಯಾ ಸೇವೆಯನ್ನೊಳಗೊಂಡ ಅಧಿಕೃತ ಸೇವಾ ಸಂಸ್ಥೆ ‘ನ್ಯೂ ರತ್ನ ಮೋಟಾರ್ಸ್ ‘ ಮಾ.26 ರಂದು ಶುಭಾರಂಭ ಗೊಂಡಿತು.
ಸಂಸ್ಥೆಯನ್ನು, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಇದರ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ಸಂಸ್ಥೆಯ ನ್ನು ಉದ್ಘಾಟಿಸಿ ಮಾತನಾಡಿ, ಯಾವೂದೊಂದೂ ಸಂಸ್ಥೆಯೂ ಕೂಡ ಮುನ್ನಡೆಯಲು ನಿಜವಾದ ಮನಸ್ಸು ಹಾಗೂ ಉತ್ಸಾಹ ಬೇಕೂ. ಜತೆಯಲ್ಲೇ ಗ್ರಾಹಕರನ್ನು ಸಂತೋಷ ,ಖುಷಿ ಪಡಿಸುವಂಥಹ ಕೆಲಸ. ಈಗೀನ ಕಾಲಘಟ್ಟದಲ್ಲಿ ಎಲ್ಲೂ ಕೂಡ ಯೋಗ್ಯ ರೀತಿಯ ಸೇವೆ ಸಿಗುತ್ತಿಲ್ಲ , ಅತ್ಯುತ್ತಮವಾದ ಸೇವೆ ನೀಡೋ ಮೂಲಕ ಸಂಸ್ಥೆ ಚಿಗುರಲಿ , ಇದಕ್ಕೆ ಪಾಲುದಾರಾರ, ಸಿಬ್ಬಂದಿಗಳ ಸಹಕಾರ ಅತ್ಯಗತ್ಯವಾದ ದ್ದು ಎಂದು ಹೇಳಿ ಹರಸಿದರು.
ಗಣೇಶ್ ರವರು ಮಾತನಾಡಿ ಸರಿ ಸುಮಾರು ಇಪ್ಪತ್ತು ವರ್ಷಗಳು ಅನುಭವ ಇರುವಂತಹ ಪಾಲುದಾರಿಬ್ಬರು ಆರಂಭಿಸಿರೋ ಈ ಸಂಸ್ಥೆ ,
ಏನೋ ಒಂದು ಸಾಧನೆ ಮಾಡಬೇಕೆಂಬ ಆಸೆಯಿಂದ ನುರಿತ ಕೆಲಸಗಾರರನ್ನು ಕೂಡಿಕೊಂಡು ಪ್ರಾರಂಭವಾಗಿದೆ. ಹಿತ ಮಿತ ದರದಲ್ಲಿ ಸೇವೆ ಕೊಡುವಲ್ಲಿ ಯಶಸ್ವಿಯಾದಲ್ಲಿ, ಸಂಸ್ಥೆಯು ಖಂಡಿತ ಮುಂದೆ ಬರಲು ಸಾಧ್ಯವಿದೆಯೆಂದರು. ಉಪ್ಪಿನಂಗಡಿ ಗ್ರಾ.ಪಂ.ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಪಾಲುದಾರ ಗಂಗಾಧರರವರ ಮಾತೃಶ್ರೀ ಕುಸುಮಾವತಿ, ಪಾಲುದಾರ ವಸಂತರವರ ತಂದೆ ವೀರಪ್ಪ ಗೌಡ, ಪಾದಾಲ ಸುಬ್ರಹ್ಮಣ್ಯ ದೇವಾಲಯದ ಮೊಕ್ತೇಸರ ಶಂಕರ್ ಭಟ್, ಸಂಕೀರ್ಣ ಮಾಲಕ ಜಯಂತ್ ಹಾಗೂ ಅವರ ಮಾತೃಶ್ರೀ ರತ್ನಾವತಿ ಸಹಿತ ಹಲವು ಅತಿಥಿಗಳು ಆಗಮಿಸಿ ಹಾರೈಸಿದರು. ಸಂಸ್ಥೆಯ ಸಿಬಂದಿಗಳು ಸಹಕರಿಸಿ, ಪಾಲುದಾರರಾದ ಗಂಗಾಧರ್, ವಸಂತ್ ಸಹಕಾರ ಯಾಚಿಸಿ , ವಂದಿಸಿದರು.
20 ವರುಷಗಳ ಅನುಭವ, ವಿನೂತನ ಮಾದರಿಯ ಸಲಕರಣೆಗಳೂ ಹಾಗೂ ಅದ್ಬುತ ಅನುಭವವುಳ್ಳ ತಂಡ. ಪೈಂಟಿಂಗ್, ಎ.ಸಿ., ಮೆಕ್ಯಾನಿಕಲ್, ಬಾಡಿ ರಿಪೇರ್, ಫೋಮ್ ವಾಶಿಂಗ್, ಆ್ಯಕ್ಸಿಡೆಂಟ್ ಕ್ಲೇಮ್, ಇನ್ಸೂರೆನ್ಸ್ ರೀನಿವಲ್, ಟೂ ವೀಲ್ಹರ್ ವಾಷಿಂಗ್ ಜೊತೆಗೆ ಸೆಕೆಂಡ್ಹ್ಯಾಂಡ್ ಕಾರ್ ಸೇಲ್ಸ್ ಆ್ಯಂಡ್ ಪರ್ಚೇಸ್ ಈ ಎಲ್ಲಾ ಸೇವೆಗಳೂ ಗುಣಮಟ್ಟ, ಯೋಗ್ಯ ದರದೊಡನೆ ಎಂದೆಂದಿಗೂ ಲಭ್ಯ-ಸಂಸ್ಥೆಯಪಾಲುದಾರರು. ಮೊ: 9632261706,9741352055.