ಪುತ್ತೂರು: ಐತ್ತೂರು ಗ್ರಾಮ ಪಂಚಾಯತ್ ನ ಸ್ವಂತ ನಿಧಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಮಾ.28ರಂದು ನಡೆಯಿತು. ಶೇ. 25ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ 16 ಮಂದಿಗೆ ಕುಡಿಯುವ ನೀರಿನ ಟ್ಯಾಂಕ್, ಶೇ.5ರ ಅನುದಾನದಲ್ಲಿ ಈರ್ವರಿಗೆ ಕುಡಿಯುವ ನೀರಿನ ಟ್ಯಾಂಕ್, ಓರ್ವರಿಗೆ ಶ್ರವಣ ಸಾಧನ , ಈರ್ವರು ವಿಕಲಚೇತನರಿಗೆ ಮಂಚ ಮತ್ತು ನಾಲ್ವರಿಗೆ ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಶ್ಯಾಮಲಾ, ಉಪಾಧ್ಯಕ್ಷ ರೋಹಿತ್ ಗೌಡ, ಪಿಡಿಓ ಸುಜಾತ ಕೆ. ಮತ್ತಿತರರು ಉಪಸ್ಥಿತರಿದ್ದರು.