ಬೆಂಗಳೂರಿನಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೊಡಂಗೈ ನಿವಾಸಿ ಸಹಿತ ಇಬ್ಬರ ಬಂಧನ

0

ವಿಟ್ಲ: ಮಾದಕ‌ ವಸ್ತುಗಳನ್ನು‌ ಮಾರಾಟ ಮಾಡಲೆತ್ನಿಸುತ್ತಿದ್ದ ವೇಳೆ ವಿಟ್ಲಪಡ್ನೂರು ನಿವಾಸಿ ಸಹಿತ ಇಬ್ಬರನ್ನು ಬೆಂಗಳೂರಿನ ಹೆಬ್ಬಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

 

 ವಿಟ್ಲಪಡ್ನೂರ ಗ್ರಾಮದ ಕೊಡಂಗಾಯಿ ನಿವಾಸಿ ಅಬ್ಬಾಸ್ ರವರ ಪುತ್ರ ಹಸನ್ ಸಾದಿಕ್(೩೫ ವ.) ಹಾಗೂ  ಬೆಂಗಳೂರಿನ ಅಶಾಕ್ ರವರ ಪುತ್ರ ತಲ್ಲಾಖಾನ್(೨೧ ವ.) ಬಂಧಿತ ಆರೋಪಿಗಳಾಗಿದ್ದಾರೆ. ಮಾ.೨೮ರಂದು  ನಾಗೇನಹಳ್ಳಿಯ ರೈಲ್ವೆ ಟ್ರಾಕ್ ಬಳಿ ಇಬ್ಬರು ಆರೋಪಿಗಳು ಬೈಕ್ ನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ  ಮಾಹಿತಿ ಮೇರೆಗೆ ಬೆಂಗಳೂರಿನ ಹೆಬ್ಬಾಳ ಠಾಣಾ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ  ಇಬ್ಬರು ಆರೋಪಿಗಳ ಸಹಿತ  23ಗ್ರಾಂ ಎಂ.ಡಿ. ಎಂ. ಎ ಹಾಗೂ ಕೃತ್ಯಕ್ಕೆ ಬಳಸಿ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭಿಸಿದೆ. ಈ ಬಗ್ಗೆ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here