‘ಲಂಚ, ಭ್ರಷ್ಟಾಚಾರ ಕುರಿತು ನಿಮಗೆ ಸಾರ್ವಜನಿಕರು ದೂರು ನೀಡಿದರೆ ತಿಳಿಸಿ-ಕಾನೂನು ಕ್ರಮಕೈಗೊಳ್ಳುತ್ತೇವೆ’

0

  •  ಸುದ್ದಿ  ಜನಾಂದೋಲನಕ್ಕೆ ಎಸಿಬಿ ಬೆಂಬಲ

ಪುತ್ತೂರು: ಲಂಚ, ಭ್ರಷ್ಟಾಚಾರ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಜನಾಂದೋಲನಕ್ಕೆ ಭ್ರಷ್ಟಾಚಾರ ನಿಗ್ರಹ ದಳದವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ತುಕಾರಾಮ್ ಅವರಿಂದ ಎಸಿಬಿ ಇನ್ಸ್‌ಪೆಕ್ಟರ್‌ಗಳಾದ ಗುರುರಾಜ್ ಮತ್ತು ಶ್ಯಾಂಸುಂದರ್ ಅವರು ಫಲಕ ಪಡೆದುಕೊಳ್ಳುತ್ತಿರುವುದು.

ಮಂಗಳೂರಿನಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್‌ಪೆಕ್ಟರ್‌ಗಳಾದ ಶ್ಯಾಮ್‌ಸುಂದರ್ ಮತ್ತು ಗುರುರಾಜ್ ಅವರು ಸುದ್ದಿ ಬಿಡುಗಡೆ ಬೆಳ್ತಂಗಡಿ ವರದಿಗಾರ ತುಕಾರಾಮ ಅವರಿಂದ ಸುದ್ದಿ ಜನಾಂದೋಲನದ ಫಲಕ ಪಡೆದುಕೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಆಂದೋಲನಕ್ಕೆ ನಮ್ಮ ಸಹಕಾರ ಇದೆ.ಪುತ್ತೂರಿನಲ್ಲಿ ನಡೆದ, ಲಂಚ-ಭ್ರಷ್ಟಾಚಾರ ವಿರುದ್ಧದ ಜನಾಂದೋಲನ ಕಾರ್ಯಕ್ರಮಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆಯವರು ಬಂದಿರುವುದು ನಮಗೆ ಗೊತ್ತಿದೆ.ಸುದ್ದಿಯ ಮೂಲಕ ಒಂದು ಅತ್ಯುತ್ತಮ ಕಾರ್ಯಕ್ರಮ ನಡೆಯುತ್ತಿದೆ.ಲಂಚ, ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ನಿಮಗೆ ದೂರು ನೀಡಿದರೆ ನಮಗೆ ಮಾಹಿತಿ ನೀಡಿ.ಇದರ ಬಗ್ಗೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್‌ಪೆಕ್ಟರ್‌ಗಳಾದ ಶ್ಯಾಂಸುಂದರ್ ಮತ್ತು ಗುರುರಾಜ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here