ಪಚ್ಚಾಡಿ ತರವಾಡು ನೇಮೋತ್ಸವ

0

ಪುತ್ತೂರು: ಕರ್ವೇಲ್  ಸಮೀಪದ ಪಚ್ಚಾಡಿ ತರವಾಡಿನಲ್ಲಿ ನೇಮೋತ್ಸವ ಬುಧವಾರದಿಂದ ಶುಕ್ರವಾರದವರೆಗೆ ನಡೆಯಿತು.

 

ಬುಧವಾರ ಪಚ್ಚೋಡಿಬೈಲ್  ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ಗಣಹೋಮ, ರುದ್ರಾಂಡಿ, ಪಂಜುರ್ಲಿ, ಕಲ್ಲುರ್ಟಿ ದೈವದ ಮೂರ್ತಿ ಪ್ರತಿಷ್ಠೆ ಪೂರ್ವಾರಧನೆ, ತಂಬಿಲ ಸೇವೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ರಕ್ತೇಶ್ವರಿ, ಮೈಸಂದಾಯ, ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.
ಗುರುವಾರ ರಾತ್ರಿಯಿಂದ ವರ್ಣರ ಪಂಜುರ್ಲಿ, ಕಲ್ಲುರ್ಟಿ, ಸತ್ಯದೇವತೆ, ಗುಳಿಗ, ಮೈಸಂದಾಯ, ಕೊರತ್ತಿ, ಧರ್ಮ ದೈವ ರುದ್ರಾಂಡಿ ನೇಮೋತ್ಸವ ಜರಗಿತು.
ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಗಂಧಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here