ಪುತ್ತೂರು: ಸರಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸದ ಸಹಾಯಧನವನ್ನು ಹೆಚ್ಚಿಸಿರುವ ಜೊತೆಗೆ ಎಲ್ಕೆಜಿ ,ಯುಕೆಜಿಯ ಮಕ್ಕಳಿಗೂ ಸಹಾಯಧನ ನೀಡುವ ನಿರ್ಧಾರ ಕೈಗೊಂಡಿರುವುದು ಸ್ವಾಗತರ್ಹ ಎಂದು ಭಾರತ ಕಟ್ಟಡ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಲೋಕೇಶ ಹೆಗ್ಡೆ ಹೇಳಿದರು.
ಭಾರತ ಕಟ್ಟಡ ಕಾರ್ಮಿಕ ಸಂಘದ ಬೊಳುವಾರು ಕಚೇರಿಯಲ್ಲಿ ಅವರು ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಮಹಾಸಭೆಯ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು. ಭಾರತ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಇನಾಸ್ ವೇಗಸ್ ಸ್ವಾಗತಿಸಿದರು. ಉಪಾಧ್ಯಕ್ಷ ರುಕ್ಮಯ್ಯ ವಂದಿಸಿದರು ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಪೌಲ್ ಡಿಸೋಜ ಉಪಸ್ಥಿತರಿದ್ದರು.