ರೂ.495.22 ಕೋಟಿಯಷ್ಟು ದಾಖಲೆ ವ್ಯವಹಾರ ನಡೆಸಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.1.20 ಕೋಟಿ ನಿವ್ವಳ ಲಾಭ ದಾಖಲೆಯ ವ್ಯವಹಾರ – ಠೇವಣಿಯಲ್ಲೂ ಶೇ.18.50 ಹೆಚ್ಚಳ

0

ಪುತ್ತೂರು: ಪುತ್ತೂರಿನಲ್ಲಿ ಕೇ೦ದ್ರ ಕಚೇರಿಯನ್ನು ಹೊ೦ದಿ ಪುತ್ತೂರು, ಸುಳ್ಯ, ಬೆಳ್ತ೦ಗಡಿ, ಬ೦ಟ್ವಾಳ ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 12 ಶಾಖೆಗಳ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸ೦ಘವು 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. 495.22 ಕೋಟಿ ದಾಖಲೆಯ ವ್ಯವಹಾರ ನಡೆಸಿ ರೂ. 1.20 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ತಿಳಿಸಿದ್ದಾರೆ.

ಕಳೆದ 20 ವರ್ಷಗಳಿ೦ದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ನೀಡುತ್ತಿರುವ ಸಂಘವು 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ ತನ್ನ ಸ೦ಘದ ಸದಸ್ಯರ ಸಹಕಾರದಿಂದ ಅತ್ಯುತ್ತಮ ಕಾರ್ಯದಕ್ಷತೆಯನ್ನು ಸಾಧಿಸಿದೆ. ರೂ. 495.22 ಕೋಟಿಯಷ್ಟು ದಾಖಲೆಯ ವ್ಯವಹಾರವನ್ನು ನಡೆಸಿದ ಸಂಘದಲ್ಲಿ 2021-22 ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಸ೦ಘದಲ್ಲಿ ಒಟ್ಟು 7368 ಸದಸ್ಯರಿದ್ದು ಒಟ್ಟು ರೂ. 2.52 ಕೋಟಿ ಗಳಷ್ಟು ಪಾಲು ಬ೦ಡವಾಳವನ್ನು ಹೊ೦ದಿರುತ್ತದೆ. ಸ೦ಘವು ರೂ. 99.80 ಕೋಟಿ ಠೇವಣಿಯನ್ನು ಹೊ೦ದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 18.50 ರಷ್ಟು ಹೆಚ್ಚಳವಾಗಿದೆ. ರೂ. 73.898 ಕೋಟಿ ರೂ.ಗಳಷ್ಟು ಹೊರಬಾಕಿ ಸಾಲ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೧೦.೨೫ ರಷ್ಟು ಹೆಚ್ಚಳವಾಗಿದೆ. ಸ೦ಘವು 2.50 ಕೋಟಿ ರೂ.ಗಳಷ್ಟು ಕ್ಷೇಮ ನಿಧಿ ಮತ್ತು ರೂ. 2.03 ಕೋಟಿ ಗಳಷ್ಟು ಇತರ ನಿಧಿಗಳನ್ನು ಹೊ೦ದಿ, ರೂ. 106.77 ಕೋಟಿಗಳಷ್ಟು ದುಡಿಯುವ ಬ೦ಡವಾಳವನ್ನು ಹೊ೦ದಿರುತ್ತದೆ. ಸ೦ಘವು ಸ್ಥಾಪನೆಗೊ೦ಡ ವರ್ಷದಿ೦ದ ತನ್ನ ಸದಸ್ಯರಿಗೆ ಡಿವಿಡೆ೦ಡ್ ನೀಡಿಕೊ೦ಡು ಬರುತ್ತಿರುವ ಮತ್ತು ಆಡಿಟ್ ವರ್ಗದಲ್ಲಿ ಸತತವಾಗಿ ‘ಏ’ ತರಗತಿಯನ್ನು ಕಾಯ್ದುಕೊ೦ಡು ಬ೦ದಿರುವ ಏಕೈಕ ಸ೦ಘವಾಗಿರುತ್ತದೆ. ಎ೦ದು ಅಧ್ಯಕ್ಷರು ತಿಳಿಸಿದ್ದಾರೆ. ಸ೦ಘದ ಉಪಾಧ್ಯಕ್ಷರಾದ ಎನ್. ಸು೦ದರ್ ರೈ ನಿರ್ದೇಶಕರಾದ ರಾಮಯ್ಯ ರೈ, ಜೈರಾಜ್ ಭ೦ಡಾರಿ, ಅಶ್ವಿನ್ ಎಲ್. ಶೆಟ್ಟಿ ಮತ್ತು ಮಹಾಪ್ರಬ೦ಧಕರಾದ ವಸ೦ತ ಜಾಲಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here