ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಶ್ರೀ ರಾಮ ನವಮಿಯ ಅಂಗವಾಗಿ ಶ್ರೀ ದೇವರ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಬಿ. ಗಣೇಶ ಶೆಣೈ, ಮೊಕ್ತೇಸರರಾದ ಡಾ.ಎಂ. ರತ್ನಾಕರ ಶೆಣೈ, ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್, ಕೆ ದೇವಿದಾಸ್ ಭಟ್ ಪ್ರಮುಖರಾದ ಕೆ. ನಾಗೇಶ ನಾಯಕ್, ಕೆ. ರಾಘವೇಂದ್ರ ಪ್ರಭು, ರಾಮು ಪೈ, ಅಶ್ವಿನ್ ಕಿಣಿ, ಯಂ. ಸತ್ಯ ಪ್ರಸಾದ್ ಭಟ್, ಎನ್ ವೈಭವ್ ಪ್ರಭು, ಮಂಜುನಾಥ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.