![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಫೋಟೋಶಾಪ್ ಮತ್ತು ವೂಲೆನ್ ಕ್ರಾಫ್ಟ್ ತರಬೇತಿ ನಡೆಯಿತು.
ಮಾ.31 ಹಾಗೂ ಎ.1ರಂದು ನಡೆದ ಫೋಟೋಶಾಪ್ ತರಬೇತಿಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕಟ್ಟಪುಣಿ ಮತ್ತು ವೂಲೆನ್ ಕ್ರಾಫ್ಟ್ ತರಬೇತಿಯನ್ನು ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ, ಮಹಿಳಾ ಸೊಸೈಟಿ ನಿರ್ದೇಶಕಿ, ವೂಲೆನ್ ಕ್ರಾಫ್ಟ್ ಟೈಲರಿಂಗ್ ಪರಿಣಿತರಾದ ಸುಜಾತ ಗಣೇಶ್ರವರು ನಡೆಸಿಕೊಟ್ಟರು. ಎ.5ರಂದು ಕೃಷಿ ತರಬೇತಿಯನ್ನು ಮಲ್ಲಿಗೆ ಕೃಷಿಕ ಭಾಸ್ಕರ ಕಲ್ಲೇರಿಯವರು ನಡೆಸಿಕೊಟ್ಟರು. ಅಬುದಾಬಿ ದುಬೈಯಲ್ಲಿ ಕೌನ್ಸಿಲರ್ ಆಗಿರುವ ರಶ್ಮಿಯವರು ಎ.7 ರಂದು VARK ತರಬೇತಿ ನಡೆಸಿಕೊಟ್ಟರು. ಎ.9ರಂದು ನಡೆದ ಪೇಪರ್ ಕ್ರಾಫ್ಟ್ ತರಬೇತಿಯನ್ನು ಕರಕುಶಲ ವಸ್ತುಗಳ ತಯಾರಕಿ ಸುಮನಾರವರು ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.