ಉಪ್ಪಿನಂಗಡಿ: ಕೊಯಿಲ ಗ್ರಾಮದ ಸಂನ್ಯಾಸಿಮೂಲೆ ನಿವಾಸಿ, ದಿವಂಗತ ಕೆ.ವಿ. ಜಾರ್ಜ್ರವರ ಪುತ್ರ ಐಸಾಕ್ (53 ವ.) ಎ. 12ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಆಟೋ ರಿಕ್ಷಾ ಚಾಲಕರಾಗಿದ್ದ ಐಸಾಕ್ರವರು ಕಳೆದ 20 ವರ್ಷಗಳಿಂದ ಆಟೋ ರಿಕ್ಷಾ ಚಾಲಕರಾಗಿದ್ದು, 2005ರಿಂದ ಕೊಯಿಲದಲ್ಲಿದ್ದುಕೊಂಡು ಆಟೋ ಚಾಲನೆ ಆರಂಭಿಸಿದ್ದು, ಆ ಬಳಿಕ 2008ರಿಂದ ಬೆಂಗಳೂರುನಲ್ಲಿ ನೆಲೆಸಿ ಅಲ್ಲಿ ಆಟೋ ರಿಕ್ಷಾದಲ್ಲಿ ದುಡಿಯುತ್ತಿದ್ದರು. ಇದೀಗ ಕಳೆದ 3 ವರ್ಷದಿಂದ ಮತ್ತೆ ಊರಿಗೆ ಬಂದು ಕೊಯಿಲದಲ್ಲಿ ರಿಕ್ಷಾ ಚಲಾಯಿಸಿಕೊಂಡಿದ್ದರು.ಐಸಾಕ್ರವರು ತಾಯಿ ಸೋಸಮ್ಮ, ಸಹೋದರಿ ಆಲಿಸ್ ಮತ್ತು ಸಹೋದರ ಅಬ್ರಾಹಂರನ್ನು ಅಗಲಿದ್ದಾರೆ.