ಕಾರ್ಪಾಡಿಯಲ್ಲಿ ವಿಷು ಆಚರಣೆ: ಆಟೋಟ ಸ್ಪರ್ಧೆ

0

 

ಪುತ್ತೂರು: ಇಲ್ಲಿನ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿಂದೂ ಹಬ್ಬ ವಿಷು ಪ್ರಯುಕ್ತ ಆಟೋಟ ಸ್ಪರ್ಧೆ ನಡೆಸಲಾಯಿತು.ಸ್ಥಳೀಯರಾದ ಬಾಬು ನಾಯ್ಕ ಕಬ್ಬಿನಹಿತ್ತಿಲು ದೀಪ ಬೆಳಗಿ ಸ್ಪರ್ಧೆಗೆ ಚಾಲನೆ ನೀಡಿದರು. ಸರಕಾರದ ಆದೇಶದ ಪ್ರಕಾರ ಬಳಿಕ ರಂಗೋಲಿ, ಭಜನೆ, ಭಕ್ತಿಗೀತೆ ಮೊದಲಾದ ಆಟೋಟಗಳು ಜರಗಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು ಶುಭಹಾರೈಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ಕಿಶೋರ್ ಗೌಡ ಮರಿಕೆ, ವಿಠಲ್ ರೈ ಮೇರ್ಲ, ಭಾರತಿ ಸಾಂತಪ್ಪ ಪೂಜಾರಿ  ಕಾರ್ಪಾಡಿ, ಸ್ಥಳೀಯರಾದ ಸುಮ ಸುಬ್ರಾಯ ಭಟ್, ಗೀತಾ ಗೋವಿಂದ ಭಟ್,  ವಿದ್ಯಾಶ್ರೀ, ಸಂದೀಪ ನಾಯ್ಕ ಯುವಜನ ಒಕ್ಕೂಟ ಅಧ್ಯಕ್ಷರು, ರಾಮಚಂದ್ರ ಕುಲಾಲ್,  ಸುರೇಶ್ ನಾಯ್ಕ, ಸುಚಿತ್ರ ಸುರೇಶ್ ನಾಯ್ಕ, ಜ್ಯೋತಿ ಯತೀಶ್ ದೇವ ಸಂಟ್ಯಾರು, ರಾಕೇಶ್ ಪರನೀರು, ಮಹೇಶ್ ಗೌಡ ಮರಿಕೆ, ಯಶನ್ ಖಂಡಿಗ, ಅರ್ಚಕರು ಮನೋಜ್ ಭಟ್, ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here