ಉಪ್ಪಿನಂಗಡಿ: ಜಾತ್ಯಾತೀತ ಜನತಾದಳ ಪಕ್ಷದ ಜನತಾ ಜಲಧಾರೆ ರಥ ಎ. 20ರಂದು ಬೆಳಿಗ್ಗೆ ಉಪ್ಪಿನಂಗಡಿಗೆ ಆಗಮಿಸಿದ್ದು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಬಳಿ ರಥವನ್ನು ಸ್ವಾಗತಿಸಲಾಗಿ, ನೇತ್ರಾವತಿ ನದಿ ನೀರು ಸಂಗ್ರಹಿಸಿ, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿ ರಥದಲ್ಲಿರುವ ಕಳಸಕ್ಕೆ ಹಾಕಲಾಯಿತು.
ದೇವಸ್ಥಾನದಿಂದ ಹೊರಟ ರಥ ಬಸ್ ನಿಲ್ದಾಣಕ್ಕೆ ಆಗಮಿಸಿ ಸಭೆ ನಡೆಸಲಾಯಿತು. ಜೆ.ಡಿ.ಎಸ್. ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಜಾಕೆ ಮಾಧವ ಗೌಡ, ದ.ಕ. ಜಿಲ್ಲಾ ಜೆಡಿಎಸ್. ಮಹಿಳಾ ಘಟಕದ ಕಾರ್ಯದರ್ಶಿ ಪ್ರಿಯಾ ಸಾಲ್ಯಾನ್ ಮಾತನಾಡಿದರು. ಪಕ್ಷದ ಪದಾಧಿಕಾರಿಗಳಾದ ಐ.ಸಿ. ಕೈಲಾಸ್, ಇಬ್ರಾಹಿಂ ಗೋಳಿಕಟ್ಟೆ, ಪ್ರಭಾಕರ ಸಾಲ್ಯಾನ್, ಶಿವು ಸಾಲ್ಯಾನ್, ಆರ್.ಕೆ. ರಾಧಾಕೃಷ್ಣ ಸಾಲ್ಯಾನ್, ಖಲಂದರ್ ಶರೀಫ್, ಇಬ್ರಾಹಿಂ ಮರೀಲು, ಕವಿರಾಜ ಗುಂಡ್ಯ, ಅಬ್ದುಲ್ ರಹಿಮಾನ್ ಮೇದರಬೆಟ್ಟು, ಜಯರಾಜ ಅಮೀನ್, ಮಹಾವೀರ ಜೈನ್, ವಿಕ್ಟರ್ ಗೋನ್ಸಾಲ್ವಿಸ್, ಚಂದ್ರ ಬೀರಿಗ, ಹಂಝ ಕಬಕ, ಇಬ್ರಾಹಿಂ ಕೆದಿಲ ಮತ್ತಿತರರು ಉಪಸ್ಥಿತರಿದ್ದರು.