ಬಾಲವನದಲ್ಲಿ ಮಕ್ಕಳ ಬೇಸಿಗೆ ಶಿಬಿರ ’ಬಣ್ಣ ಭಾವ’ ಉದ್ಘಾಟನೆ

0

ಪುತ್ತೂರು: ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಡಾ| ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು, ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇದರ ವತಿಯಿಂದ ಬಾಲವನದಲ್ಲಿ 5 ದಿನಗಳ ಕಾಲ ನಡೆಯುವ ಮಕ್ಕಳ ಬೇಸಿಗೆ ಶಿಬಿರ ’ಬಣ್ಣ ಭಾವ’ ಎ.20ರಂದು ಉದ್ಘಾಟನೆಗೊಂಡಿತ್ತು.

 


ಸಹಾಯಕ ಆಯುಕ್ತರಾಗಿರುವ ಬಾಲವನ ಸಮಿತಿಯ ಅಧ್ಯಕ್ಷ ಗಿರೀಶ್ ನಂದನ್ ಮತ್ತು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಶಿಬಿರವನ್ನು ಉದ್ಘಾಟಿಸಿದರು. ಕಲಾ ಶಿಕ್ಷಕರಾದ ಭಾಸ್ಕರ ನೆಲ್ಯಾಡಿ, ಸುಧೀರ್ ಬಾಳೆಪುಣಿ, ಕಲಾವಿದ ಚರಣ್ ಕುಮಾರ್ ಪುದು, ಯಕ್ಷಗಾನ ಕಲಾವಿದ ಶಿಕ್ಷಕ ತಾರಾನಾಥ ಸವಣೂರು, ಗೂಡುದೀಪ ಕಲಾವಿದೆ ಯಶೋಧಾ ಹಂಟ್ಯಾರು, ಬಾಲವನದ ಕಾರ‍್ಯಕ್ರಮ ಸಂಯೋಜಕ ಜಗನ್ನಾಥ ಪಿ ಅರಿಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here