ಪುತ್ತೂರು: ಉಪ್ಪಿನಂಗಡಿ ವಲಯ ಬಂಟರ ಸಂಘದ ವತಿಯಿಂದ ಎ.21 ರಂದು ಸಂಜೆ 3ರಿಂದ ಕೋಡಿಂಬಾಡಿ ಸೀತಾರಾಮ ಶೆಟ್ಟಿರವರ ಹೆಗ್ಡೆಹಿತ್ಲು ಮನೆಯಲ್ಲಿ ಉಪ್ಪಿನಂಗಡಿ ವಲಯ ವ್ಯಾಪ್ತಿಯ ಉಪ್ಪಿನಂಗಡಿ, ನೆಕ್ಕಿಲಾಡಿ 34 , ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಹಿರೇಬಂಡಾಡಿ ಹಾಗೂ ಬಜತ್ತೂರು ವ್ಯಾಪ್ತಿಯ ಬಂಟ ಬಂಧುಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ಎ. 30 ರಂದು ಪುತ್ತೂರಿನಲ್ಲಿ ನಡೆಯಲಿರುವ ಬಂಟ್ರೆ ಗೌಜಿ 2022 ಕಾರ್ಯಕ್ರಮದ ಯಶಸ್ಸಿ ಬಗ್ಗೆ ಸಿದ್ಧತಾ ಸಭೆಯು ನಡೆಯಲಿದೆ ಎಂದು ಉಪ್ಪಿನಂಗಡಿ ವಲಯ ಬಂಟರ ಸಂಘದ ಪ್ರಕಟನೆ ತಿಳಿಸಿದೆ.