ಪುತ್ತೂರು: ಇತಿಹಾಸ ಪ್ರಸಿದ್ದ ಆರ್ಯಾಪು ಗ್ರಾಮದ ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಮಾರಿಪೂಜೆಯು ಎ.26 ಮತ್ತು 27ರಂದು ಕ್ಷೇತ್ರದ ತಂತ್ರಿವರ್ಯರಾದ ವೇ.ಮೂ.ಬ್ರಹ್ಮಶ್ರೀ ನಾಗೇಶ ತಂತ್ರಿ ಕೆಮ್ಮಿಂಜೆರವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ರೈ ಮಿಷನ್ಮೂಲೆರವರ ಮುಂದಾಳತ್ವದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರದ ವಾರ್ಷಿಕ ಮಾರಿ ಪೂಜೆಯ ಪ್ರಯುಕ್ತ ಗೊನೆ ಮುಹೂರ್ತವನ್ನು ಎ.20 ರಂದು ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರರಾದ ಗಂಗಾಧರ ಸೀಗೆಬಲ್ಲೆ ವಿಟ್ಲ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಸುನಿಲ್ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ರವಿಚಂದ್ರ ಆಚಾರ್ಯ, ಸದಸ್ಯರಾದ ಆನಂದ ಅಮೀನ್ ಹೊಸಮನೆ, ಶೇಷಪ್ಪ ಗೌಡ(ನಿವೃತ್ತ ಪೊಲೀಸ್ ಅಧಿಕಾರಿ), ಚಂದ್ರಕಲಾ ರವಿಪ್ರಕಾಶ್ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಪವಿತ್ರಾ ರೈ, ಹಾಗೂ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ಪಿ, ಖಜಾಂಜಿ ಸುರೇಶ್ ಪಿ, ಸದಸ್ಯರಾದ ರಾಮ ಕಾರೆಕ್ಕಾಡು, ಗೋಪಾಲ್ ಜಿ.ಬೆಟ್ಟಂಪಾಡಿ, ಭಾಸ್ಕರ ನೆಲ್ಲಿಗುಂಡಿ, ಮಚ್ಚೇಂದ್ರ, ಚಿದಾನಂದ ಆರ್ಯಾಪು, ನವೀನ್, ಹರೀಶ, ರಮೇಶ ಮೇಲಿನಕಾನ, ತನಿಯಪ್ಪ ಮೆಲಿನಕಾನ, ಯೋಗೀಶ, ಧನುಷ್ ಕಡೆಶಿವಾಲಯ, ಭರತ್ ಕಡೆಶಿವಾಲಯ, ಸುಭಾಸ್, ಸುರೇಶ್ ಮೇಸ್ತ್ರೀ, ರಾಮ ಆರ್ಯಾಪು, ಅಶೋಕ, ಧನುಷ್ ಆರ್ಯಾಪು, ಸನ್ವಿತ್, ಸಂಹಿತ್, ಗಿರೀಶ ಹಾಗೂ ಹಲವಾರು ಭಕ್ತರು ಹಾಜರಿದ್ದರು.