ನೆಟ್ಟಣ ಬ್ಯಾಂಕ್ ಆಫ್ ಬರೋಡಾಗೆ ಸ್ಥಳೀಯ ಭಾಷೆ ಮಾತನಾಡುವವರನ್ನು ನೇಮಕ ಮಾಡಿ

0

  • ಬಿಳಿನೆಲೆ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

ಪುತ್ತೂರು: ಬಿಳಿನೆಲೆ ಗ್ರಾ.ಪಂ ಸಾಮಾನ್ಯ ಸಭೆ ಗ್ರಾ.ಪಂ ಅಧ್ಯಕ್ಷ ಶಿವಶಂಕರ್ ಕೆ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಎ.27ರಂದು ನಡೆಯಿತು.

ನೆಟ್ಟಣದಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ಥಳೀಯ ಭಾಷೆ ಮಾತನಾಡುವವರನ್ನು ನೇಮಕ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು. ನಂತರ ಈ ಬಗ್ಗೆ ಚರ್ಚೆ ನಡೆದು ಸಂಬಂಧಪಟ್ಟವರಿಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು. 2022-23ನೇ ಸಾಲಿನ 15 ನೇ ಹಣಕಾಸು, ಸ್ವಂತ ನಿಧಿ, ಗ್ರಾಮ ವಿಕಾಸದ ಕ್ರಿಯಾ ಯೋಜನೆಯನ್ನು ತಯಾರಿಸಲಾಯಿತು. ಗ್ರಾಮದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.

ಗ್ರಾ.ಪಂ ಉಪಾಧ್ಯಕ್ಷೆ ಶಾರದಾ ದಿನೇಶ್, ಪಿಡಿಓ ಸುಜಾತ, ಕಾರ್ಯದರ್ಶಿ ಶೀನ, ಗ್ರಾ.ಪಂ ಸದಸ್ಯರುಗಳಾದ ಸುಧೀರ್ ಕುಮಾರ್ ಶೆಟ್ಟಿ, ಚಂದ್ರಾವತಿ, ಬೇಬಿ, ಶಾರದ ಲಕ್ಷ್ಮಣ ಆಚಾರ್‍ಯ, ಭವ್ಯಶ್ರೀ, ಸತೀಶ್ ಕಳಿಗೆ, ಮುರಳೀಧರ.ಎ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here