ಕಾಣಿಯೂರು: ಆಂಬ್ಯುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

0

 

 

ಕಾಣಿಯೂರು: ಫ್ರೆಂಡ್ಸ್ ಸೋರ್ಟ್ಸ್ ಕ್ಲಬ್ ಕೂಡುರಸ್ತೆ ಮತ್ತು ದಾನಿಗಳ, ಸಂಘ ಸಂಸ್ಥೆಗಳ ನೆರವಿನೊಂದಿಗೆ ಕಾಣಿಯೂರಿನಲ್ಲಿ ಆಂಬ್ಲುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮವು ಮೇ.8ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣವನ್ನು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಎದುರು ಎ.27ರಂದು ಅನಾವರಣಗೊಳಿಸಲಾಯಿತು.

 

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾರ್ಯದರ್ಶಿ ರವೀಂದ್ರ ಅನಿಲ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರಗತ್‌ರಾಜ್ ಬೈತಡ್ಕ, ಪದಾಧಿಕಾರಿಗಳಾದ ಶರೀಫ್ ಬೆದ್ರಾಜೆ, ಮಜೀದ್ ಬೆದ್ರಾಜೆ, ಕಾಣಿಯೂರು ಹಾ.ಉ.ಸ.ಸಂಘದ ನಿರ್ದೇಶಕ ರಾಜೇಶ್ ಮೀಜೆ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಕಾರ್ಯದರ್ಶಿ ವಿನಯ್ ಎಳುವೆ, ಸದಸ್ಯ ಜಗದೀಶ್ ಪೆರ್ಲೋಡಿ, ಕಾಣಿಯೂರು ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಕಾರ್ಯದರ್ಶಿ ಯತೀಶ್ ಮಾದೋಡಿ, ನಾರಾಯಣ ಗೌಡ ಕಟ್ಟತ್ತಾರು, ಕುಶಾಲಪ್ಪ ಗೌಡ ತೋಟ, ಪ್ರಶಾಂತ್ ಮುಗರಂಜ, ಸೆಲಿಮ್ ಚಡವು ಮತ್ತೀತರರು ಉಪಸ್ಥಿತರದ್ದರು.

LEAVE A REPLY

Please enter your comment!
Please enter your name here