ಪುತ್ತೂರು : ಕಲ್ಲಾರೆಯಲ್ಲಿ ಮುಖ್ಯ ರಸ್ತೆಯ ಮಧ್ಯೆ ಬಿರುಕು ಬಿದ್ದು ಸಂಚಾರಕ್ಕೆ ಅಪಾಯ ಆಹ್ವಾನಿಸಿದಂತಾಗಿದೆ. ದರ್ಬೆ ಪುತ್ತೂರು ಮುಖ್ಯರಸ್ತೆಯ ಕಲ್ಲಾರೆ ಗಿರಿಜಾ ಕ್ಲಿನಿಕ್ ಎದುರುಗಡೆ ರಸ್ತೆಯ ಮಧ್ಯೆ ಸಣ್ಣ ಗುಂಡಿ ನಿರ್ಮಾಣವಾಗಿದ್ದು ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಇದನ್ನು ಗಮನಹರಿಸಬೇಕಾಗಿದೆ.