ಪುತ್ತೂರು: ತೆಂಕಿಲ ಕೊಡಂಗೆ ಮನೆಯಲ್ಲಿ ಶ್ರೀಬಲಜಲಾಯ ದೈವಸ್ಥಾನದ ವರ್ಷಾವಧಿ ಪೂಜೆ ಹಾಗೂ ನೇಮ ಮೇ.14 ರಂದು ನಡೆಯಿತು. ಬೆಳಿಗ್ಗೆ 8.೩೦ರಿಂದ ಗಣಹೋಮ, ವೆಂಕಟರಮಣ ದೇವರ ಮುಡಿಪು ಸೇವೆ, ನಾಗತಂಬಿಲ, ರಕ್ತೇಶ್ವರಿ ತಂಬಿಲ ಹಾಗೂ ಗುಳಿಗ ತಂಬಿಲ, ಮಧ್ಯಾಹ್ನ 12.30ಕ್ಕೆ ಬಲಜಲಾಯ ದೈವದ ಮಹಾಪೂಜೆ ನಂತರ ಅನ್ನಸಂತರ್ಪಣೆ, ಸಂಜೆ 7ರಿಂದ ದೈವಗಳ ಭಂಡಾರ ತೆಗೆದು, ರಾತ್ರಿ ಅನ್ನಸಂತರ್ಪಣೆ ನಂತರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ನೇಮ ನಡೆಯಿತು
ಬಾಲಕೃಷ್ಣ ನಾಯಕ್ ಕಟ್ಟತ್ತಾರು, ಜಯರಾಮ ನಾಯಕ್ ಕೊಡಂಗೆ, ಕೊಡಂಗೆ ಬಾಲಕೃಷ್ಣ ನಾಯಕ್ ಮಂಗಳೂರು, ಸಂಜೀವ ನಾಯಕ್ ತೆಂಕಿಲ, ಪುರುಷೋತ್ತಮ ನಾಯಕ್ ಪಾಂಗ್ಲಾಯಿ, ಉಮೇಶ್ ನಾಯಕ್ ಕಾಸರಗೋಡು, ಶಶಿಧರ್ ನಾಯಕ್ ತೆಂಕಿಲ, ರೂಪೇಶ್ ನಾಯಕ್ ಕೊಡಂಗೆ,ನಿತೇಶ್ ನಾಯಕ್ ಕೊಡಂಗೆ, ಸಚಿನ್ ನಾಯಕ್ ಕೊಡಂಗೆ, ಗುರುಪ್ರಸಾದ್ ನಾಯಕ್ ಕಟ್ಟತ್ತಾರು, ಸುನಿಲ್ ನಾಯಕ್ ಪಾಂಗ್ಲಾಯಿ, ಕೌಶಿಕ್ ನಾಯಕ್ ತೆಂಕಿಲ, ದಯಾರಾಜ್ ನಾಯಕ್ ತೆಂಕಿಲ ಸೇರಿದಂತೆ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.