ವೀರಮಂಗಲ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರ ಕಿರೀಟದೊಂದಿಗೆ ಶಾಲಾ ಪ್ರಾರಂಭೋತ್ಸವ

0

 

 

 

ಪುತ್ತೂರು: ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇ. 16ರಂದು ಶಾಲಾ ಪ್ರಾರಂಭೋತ್ಸವ ಅದ್ದೂರಿಯಿಂದ ನಡೆಯಿತು. ಮಕ್ಕಳಿಗೆ ಅಕ್ಷರ ಕಿರೀಟವನ್ನು ಧರಿಸುವ ಮೂಲಕ ಸ್ವಾಗತಿಸಲಾಯಿತು. ಬಳಿಕ ಕುಂಕುಮ ಆರತಿ ಬೆಳಗಿ ಸ್ವಾಗತಿಸಲಾಯಿತು. ಶೈಕ್ಷಣಿಕ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ಇಲಾಖಾ ಸೂಚನೆಗಳನ್ನು ಪೋಷಕರ ಸಭೆಯನ್ನು ನಡೆಸಿ ವಿದ್ಯಾ ಪ್ರವೇಶ ಕಲಿಕಾ ಚೇತರಿಕೆ ಮಳೆಬಿಲ್ಲು ಗ್ರಂಥಾಲಯ ಬಳಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಳ ಬಗ್ಗೆ ಮಾಹಿತಿ ನೀಡಲಾಯಿತು ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಪುಸ್ತಕ ಮತ್ತು ನೀಡಲಾಯಿತು ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಸುಧಾಕರ್ ಕುಲಾಲ್ ಉಪಸ್ಥಿತರಿದ್ದರು. ಎಸ್ ಡಿ ಎಂಸಿ ಅಧ್ಯಕ್ಷ ಅನುಪಮಾ, ಗ್ರಾಮ ಪಂಚಾಯಿತಿ ಸದಸ್ಯೆ ಚಿತ್ರ ಉಪಸ್ಥಿತರಿದ್ದರು . ಶಿಕ್ಷಕರಾದ ಹರಿಣಾಕ್ಷಿ ಶೋಭಾ ಕವಿತಾ ಹೇಮಾ ಗಾಯತ್ರ್ಯ. ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು ಪೋಷಕ ಗೋಪಾಲಕೃಷ್ಣ ವೀರಮಂಗಲ, ಎಸ್‌ಡಿಎಂಸಿಅಧ್ಯಕ್ಷ ಶ್ರೀಮತಿ ಅನುಪಮ ಉಪಾಧ್ಯಕ್ಷ ರಜಾಕ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು ಮುಖ್ಯಗುರು ತಾರಾನಾಥ ಸವಣೂರು ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here