ಪುತ್ತೂರು: ಸಾಮೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆರವಣಿಗೆ ಮೂಲಕ ಮಕ್ಕಳನ್ನು ಕರೆ ತಂದು ಆರತಿ ಬೆಳಗಿ ಅವರನ್ನು ತರಗತಿಯೊಳಗೆ ಸ್ವಾಗತಿಸುವ ಮೂಲಕ ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಗೋಪಾಲ ಕೃಷ್ಣ ಭಟ್. ಕಾರ್ಯದರ್ಶಿ ದಿನೇಶ್ ಕಾಮತ್, ಶಾಲಾ ಮುಖ್ಯೋಪಾದ್ಯಾನಿ ಮೀನಾ ಟೀಚರ್, ಎಸ್ಡಿಎಂಸಿ ಅಧ್ಯಕ್ಷೆ ಪಂಚಾಕ್ಷರಿ, ಸದಸ್ಯರಾದ ವೆಂಕಟ್ರಮಣ ಭಟ್, ಮಹಾಲಿಂಗೇಶ್ವರ ಭಟ್, ವೆಂಕಟ್ ರಾಜ್. ಮತ್ತು ಮರಿಯಾ ಎಂ. ಸಹ ಶಿಕ್ಷಕಿ ವೇದಾವತಿ ಮತ್ತು ಲಿಕಿತಾ, ಟ್ರಸ್ಟಿಗಳಾದ ಮೀನಾಕ್ಷಿ, ಇಂದಿವರ್ ಭಟ್, ಹಳೆ ವಿದ್ಯಾರ್ಥಿ ಫಾಹಿಝ್. ಉಪಸ್ಥಿತರಿದ್ದರು.