ಕಡಬ: ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಕಡಬದ ಸಾನ್ವಿಕ ಕೆ.ಎಸ್ ಅವರಿಗೆ ಕರ್ನಾಟಕ ಕ್ರೀಡಾರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗಂಗಾವತಿ ತಾಲೂಕಿನ ಲಯನ್ಸ್ ಕ್ಲಬ್ ಆವರಣದ ಐಎಂಎ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕರಾಟೆ ಕ್ರೀಡಾ ಪಟುವಾಗಿರುವ ಸಾನ್ವಿಕಾ ಕೆ.ಎಸ್ ಅವರು ಕರಾಟೆಯಲ್ಲಿ ವಿವಿಧ ಸಾಧನೆಗಳನ್ನು ಮಾಡಿ ಮಿಂಚುತ್ತಿದ್ದಾರೆ. ಇವರು ಕಡಬ ತಾಲೂಕಿನ ಆರಿಗ ಕಂಗುಳೆ ಸದಾನಂದ ಗೌಡ ಮತ್ತು ವಾಣಿ ದಂಪತಿಯ ಪುತ್ರಿ.