ಬೆಟ್ಟಂಪಾಡಿ: ನಿಡ್ಪಳ್ಳಿ ಗ್ರಾಮದ ಮುಂಡೂರು – 1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮೇ 16 ರಂದು ನಡೆಯಿತು. ಶಾಲಾ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಜಾಥಾ ಮೂಲಕ ಶಾಲೆಗೆ ತೆರಳಿದರು.
ಶಾಲೆಯಲ್ಲಿ ಮಕ್ಕಳಿಗೆ ಸ್ವಾಗತ ಮತ್ತು ಸಭಾ ಕಾರ್ಯಕ್ರಮ ನಡೆಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ ಕರ್ಕೇರರವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪೋಷಕರು, ಊರಿನ ಮಹನೀಯರು, ಹಳೆ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅಗತ್ಯ ಎಂದರು. ಕಲಿಕಾ ಚೇತರಿಕೆ ವರ್ಷ 2022_23 ರ ಬಗ್ಗೆ ಮುಖ್ಯಗುರು ಆಶಾ.ಎಸ್. ಇವರು ಮಾಹಿತಿ ವಿನಿಮಯ ಮಾಡಿದರು. ವಿದ್ಯಾ ಪ್ರವೇಶ ಯೋಜನೆಯ ಬಗ್ಗೆ ಶಿಕ್ಷಕಿ ಸಾವಿತ್ರಿ ಟಿ.ಯವರು ತಿಳಿಸಿದರು. ಮಳೆಬಿಲ್ಲು ಕಾರ್ಯಕ್ರಮದ ಬಗ್ಗೆ ಶಿಕ್ಷಕಿ ಸೌಮ್ಯ ಇವರು ಮಾಹಿತಿ ನೀಡಿದರು. ಸಿಹಿ ಭಕ್ಷ್ಯ ವಿತರಣೆ ಮೂಲಕ ಅಕ್ಷರ ದಾಸೋಹ ಕಾರ್ಯಕ್ರಮವು ಚಾಲನೆಗೊಂಡಿತು.