ಪುತ್ತೂರು : ಅರಿಯಡ್ಕ ಗ್ರಾಮದ ಪಾಪೆಮಜಲು ನಿವೃತ್ತ ಪಂಚಾಯತ್ ವಿಸ್ತರಣಾಧಿಖಾರಿ ಯಂ.ಜಗನ್ನಾಥ ರೈ ಮತ್ತು ದೇರ್ಲ ಬಾಲಾಕ್ಷಿ ಜೆ.ರೈ ದಂಪತಿಯ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಮೇ.17ರಂದು ಪಾಪೆಮಜಲು ಮನೆಯಲ್ಲಿ ನಡೆಯಿತು. ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಬಳಿಕ ಕೇಕ್ ಕತ್ತರಿಸಿ ಶುಭಹಾರೈಸಲಾಯಿತು. ಅಂಬಾನಿಲಯ ಮತ್ತು ದೇರ್ಲ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.