ಪುತ್ತೂರು: ಕೆದಂಬಾಡಿ ಗ್ರಾಮದ ಕೊಡಂಗೋಣ ನಿವಾಸಿಯಾಗಿದ್ದ ನಿವೃತ್ತ ರೇಂಜರ್ ಹಾಗು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸದಸ್ಯರಾಗಿದ್ದ ಕೆ ಕಾಂತಪ್ಪ ನಾಯ್ಕ ಅವರ ಉತ್ತರಕ್ರಿಯೆ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮ ಮೇ 18ರಂದು ಪುತ್ತೂರು ಮಾರಾಟಿ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಕೆಳ ಅಂತಸ್ತಿನ ಕಟ್ಟಡ ಕಾರ್ಯದಲ್ಲಿ ಪ್ರಮುಖರಾಗಿ ಶ್ರಮಿಸಿದ ಅವರು ಮರಾಟಿ ಸಂಘಕ್ಕೆ ಅತ್ಯಂತ ಮುತುವರ್ಜಿಯಿಂದ ಸೇವೆ ನೀಡಿದವರು. ಸುಮಾರು 7 ವರ್ಷ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅವರು ಸಂಘದ ಏಳಿಗೆಗಾಗಿ ಶ್ರಮಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಗಣ್ಯರು ನುಡಿನಮನ ಸಲ್ಲಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿದರು. ಮಾರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀವಪ್ಪ ನಾಯ್ಕ, ಉದ್ಯಮಿ ಜಯರಾಮ ರೈ ಮಿತ್ರಂಪಾಡಿ, ಮಾರಾಟಿ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಯು.ಕೆ.ನಾಯ್ಕ್, ನಾರಾಯಣ ನಾಯ್ಕ್, ಮಂಗಳೂರು ಸಂಘದ ಅಧ್ಯಕ್ಷ ನಟ್ಟಿ ರಾಮ ನಾಯ್ಕ್, ಮಹಾಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶೀನ ನಾಯ್ಕ್ ನುಡಿನಮನ ಸಲ್ಲಿಸಿದರು. ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರಾಮಚಂದ್ರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾಂಜಲಿ ಕಾರ್ಯಕ್ರಮದ ಆರಂಭದಲ್ಲಿ ಕಾಂತಪ್ಪ ನಾಯ್ಕ ಅವರ ಪತ್ನಿ ಲಲಿತ ಕೆ ನಾಯ್ಕ್, ಪುತ್ರಿಯರಾದ ಅಂಕಿತ, ಅಕ್ಷತ, ಅಶ್ವಿನಿಸಂತೋಷ್, ಅಳಿಯ ಸಂತೋಷ್, ಮೊಮ್ಮಕ್ಕಳು ಯತೀನ್, ದೈವಿಕ್ ಮತ್ತು ಸಂಬಂಧಿಕರು ಕಾಂತಪ್ಪ ನಾಯ್ಕ ಅವರ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಕುಟುಂಬ ಸಂಪ್ರದಾಯ ನೆರವೇರಿಸಿದರು.