ಪಡುಮಲೆ ಶ್ರೀ ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗರ್ಭಗುಡಿಗೆ ಷಡಧಾರ ಪ್ರತಿಷ್ಠೆ , ನಿಧಿಕುಂಭ ಸ್ಥಾಪನೆ ಮತ್ತು ನಿಧಿಸಮರ್ಪಣೆ

0

ಬಡಗನ್ನೂರು:  ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕ್ಷೇತ್ರ ಅಚಾರ್ಯರಾದ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ  ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರದ ಶಿಲ್ಪಿಗಳಾದ ಕಾಸರಗೋಡು, ಬೆದ್ರಡ್ಕ ಶ್ರೀ ರಮೇಶ್ ಕಾರಂತರ ಉಪಸ್ಥಿತಿಯಲ್ಲಿ ಮೆ.20 ರಂದು ಬೆಳಗ್ಗೆ ಗಂ 10.15 ರಿಂದ 11.30 ರ ವರೆಗಿನ ಮೀನಾ ಲಗ್ನ ಸುಮುಹೂರ್ತದಲ್ಲಿ  ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗರ್ಭಗುಡಿಗೆ ಷಡಧಾರ ಪ್ರತಿಷ್ಠೆ , ನಿಧಿಕುಂಭ ಸ್ಥಾಪನೆ ಮತ್ತು ನಿಧಿಸಮರ್ಪಣೆ ಹಾಗೂ ಸಂಜೆ ಗಂ 4 ರಿಂದ ಶಾಸ್ತಾರ ಗುಡಿಯ ಗರ್ಭನ್ಯಾಸ ಮತ್ತು ಇಷ್ಟಿಕಾನ್ಯಾಸ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here