ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರ ಸರಣಿ ನೃತ್ಯಾಂತರಂಗದ 89ನೇ ಸರಣಿಯಲ್ಲಿ ವಿದುಷಿ ಪ್ರೀತಿಕಲಾರಿಂದ ‘ಪದ್ಮನಾಭ’ ಎಂಬ ವಿಷಯಾಧಾರಿತ ಭರತನಾಟ್ಯ ನಡೆಯಿತು.
ದರ್ಬೆ ಶ್ರೀ ಶಶಿಶಂಕರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃದಂಗದಲ್ಲಿ ಗುರುಮೂರ್ತಿ ಬೆಂಗಳೂರು, ಹಾಡುಗಾರಿಕೆಯಲ್ಲಿ ರಘುರಾಮ್ ಬೆಂಗಳೂರು, ನಟುವಾಂಗದಲ್ಲಿ ದೀಪಕ್ ಕುಮಾರ್ ಹಾಗೂ ರಾಜಗೋಪಾಲನ್ ಕಾಞಂಗಾಡ್ ಕೊಳಲಿನಲ್ಲಿ ಸಹಕರಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ರವರು ಅಭ್ಯಾಗತರಾಗಿ ಆಗಮಿಸಿ ಶುಭಹಾರೈಸಿದರು.