ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬೂತ್ ವ್ಯಾಪ್ತಿಗಳ ಶಕ್ತಿಕೇಂದ್ರ ಸಭೆ

0

 

ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಯಲ್ಲಿ 108, 118, 119 ಬೂತ್ ವ್ಯಾಪ್ತಿಗಳ ಶಕ್ತಿಕೇಂದ್ರದ ಸಭೆಯು ನಡೆಯಿತು. ಶಾಸಕ ಸಂಜೀವ ಮಠಂದೂರುರವರು, ಬೂತ್ ಮಟ್ಟದಲ್ಲಿ ಹೊಸ ಮತದಾರರ ಸೇರ್ಪಡೆ, ಸಂಘಟನೆ ಕುರಿತಾಗಿ ಕಾರ್ಯಕರ್ತರೊಂದಿಗೆ ಸುದೀರ್ಘ ಸಂವಾದ ನಡೆಸಿದರು.

 


ಮಹಾಶಕ್ತಿಕೇಂದ್ರ ಪ್ರಮುಖ್, ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ “ಬೂತ್ ಮಟ್ಟದಲ್ಲಿ ಪಕ್ಷದ ಚಟುವಟಿಕೆ”, ವಿಚಾರ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು. ಬಿ.ಜೆ.ಪಿ. ನಗರಮಂಡಲ ಪ್ರ.ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಪಕ್ಷ ಹಮ್ಮಿಕೊಂಡಿರುವ ಹದಿನೇಳು ಕಾರ್ಯಕ್ರಮಗಳ ವಿವರ ನೀಡಿದರು. ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿ.ಜೆ.ಪಿ. ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬೂತ್- 108’ರ ಅಧ್ಯಕ್ಷ ಭರತ್ ಕುಲಾಲ್ ಬೊಳ್ಳಾಣ, ಪ್ರ.ಕಾರ್ಯದರ್ಶಿ ಜಯಪ್ರಕಾಶ್ ಆಚಾರ್ಯ, ಬೂತ್-118’ರ ಅಧ್ಯಕ್ಷ ಕಿಶೋರ್ ಕುಮಾರ್ ಬೇರಿಕೆ, ಬೂತ್- 119’ರ ಅಧ್ಯಕ್ಷ ಅಶೋಕ್ ಕುಂಬ್ಳೆ, ಕಾರ್ಯದರ್ಶಿ ಸುರೇಶ್, ಹಿರಿಯ ಪ್ರಮುಖ್ ಜಗದೀಶ್ ಜೋಗಿ, ವಿಶ್ವನಾಥ್ ಕುಲಾಲ್ ಹಾಗೂ ಬೂತ್ ಪ್ರಮುಖರು ಉಪಸ್ಥಿತರಿದ್ದರು. ವಿನಯ್ ಭಂಡಾರಿ ಸ್ವಾಗತಿಸಿ, ಭರತ್ ಕುಲಾಲ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here