ಪುತ್ತೂರು: ಹಿರೇಬಂಡಾಡಿ ಗ್ರಾಮ ಬಾರ್ಲ ಎಂಬಲ್ಲಿ ವಾತ್ಸಲ್ಯ ಒಕ್ಕಲಿಗ ಸ್ವಸಹಾಯ ಸಂಘವನ್ನು ಶೇಖರ ಗೌಡರವರ ಮನೆಯಲ್ಲಿ ರಚನೆ ಮಾಡಲಾಯಿತು. ಶೇಖರಗೌಡರವರು ಸಂಘವನ್ನು ಉದ್ಘಾಟಿಸಿ ಸಭಾ ನಡುವಳಿ ಯನ್ನು ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪಗೌಡ ರವರು ಮಾಹಿತಿ ನೀಡಿ ಸಂಘದ ಸದಸ್ಯರಿಗೆ ಶುಭ ಹಾರೈಸಿದರು. ಮೇಲ್ವಿಚಾರಕಿ ಆದ ಸುಮಲತಾ ಅವರು ಮಾಹಿತಿ ನೀಡಿದರು, ಪ್ರೇರಕರಾದ ತಾರಾನಾಥ್ ಧನ್ಯವಾದ ತಿಳಿಸಿದರು. ತಂಡದ ಪ್ರಬಂಧಕರಾಗಿ ದಿವಾಕರ್ ಗೌಡ ಬಿ, ಸಂಯೋಜಕರಾಗಿ ಪ್ರವೀಣ್ ಗೌಡ, ಹಾಗೂ ಸದಸ್ಯರಾಗಿ ಗಣೇಶ ಗೌಡ, ಮನೋಜ್ ಗೌಡ, ಕವಿಷ್ ಗೌಡ, ಯಶೋಧರ ಗೌಡ, ಶಿವರಾಜ್ ಗೌಡ ಕೆ, ಹರೀಶ್ ಗೌಡ ಕೆ, ಸೇರ್ಪಡೆಯಾದರು.