ಪುತ್ತೂರು: ಮಂಗಳೂರು ಬಂದರ್ನಲ್ಲಿರುವ ಝೀನತ್ ಬಕ್ಷ್ ಯತೀಂ ಖಾನಾದಲ್ಲಿ ಹಜ್ ಮತ್ತು ಉಮ್ರಾ ತರಬೇತಿ ಶಿಬಿರ ಜೂ.4ರಂದು ಬೆಳಗ್ಗಿನಿಂದ ಸಂಜೆ ವರೆಗೆ ನಡೆಯಿತು.
ಬೂಬುಕ ಜುಮಾ ಮಸೀದಿಯ ಖತೀಬ್ ಹಾಜಿ ಸಿರಾಜುದ್ದೀನ್ ಫೈಝಿ ದುವಾ ನೆರವೇರಿಸಿದರು. ಉದ್ಘಾಟಿಸಿದ ಕಂಡತ್ಪಳ್ಳಿ ಜುಮಾ ಮಸೀದಿಯ ಖತೀಬ್ ರಫೀಕ್ ಮದನಿ ಮಾತನಾಡಿ ಪವಿತ್ರವಾದ ಹಜ್ ಮತ್ತು ಉಮ್ರಾ ಕರ್ಮ ನಿರ್ವಹಿಸಲು ಅವಕಾಶ ಸಿಕ್ಕಿದವರು ಭಾಗ್ಯವಂತರಾಗಿದ್ದಾರೆ ಎಂದು ಹೇಳಿದರು. ಹಾಜಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳರವರು ಬ್ಯಾರಿ ಭಾಷೆಯಲ್ಲಿ ಮತ್ತು ಡಾ| ಹಝ್ರತ್ ಹಾಜಿ ಮಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆರವರು ಹನಫಿ ಬಾಂಧವರಿಗೆ ಉರ್ದು ಭಾಷೆಯಲ್ಲಿ ತರಬೇತಿ ನೀಡಿದರು. ಪವಿತ್ರ ಹಜ್, ಉಮ್ರಾ ನಿರ್ವಹಣೆಯ ವಿಧಿ ವಿಧಾನ ಆಚರಣಾ ಕ್ರಮ ಇತ್ಯಾದಿಗಳ ಕುರಿತು ತರಬೇತಿ ಕಾರ್ಯಗಾರ ನಡೆಯಿತು. ನೂರಾರು ಮಂದಿ ಹಜ್, ಉಮ್ರಾ ಯಾತ್ರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಹನೀಫ್ ಮಾಸ್ಟರ್ ಸ್ವಾಗತಿಸಿ ವಂದಿಸಿದರು.