ನೆಕ್ಕಿಲಾಡಿ: ಮರಳು ಸಾಗಾಟದ ಲಾರಿ ತಡೆ ಹಿಡಿದ ಸ್ಥಳೀಯರು

0

ಪುತ್ತೂರು: ರಸ್ತೆಯನ್ನು ಹಾಳುಗೆಡವುತ್ತಿರುವ ಮರಳು ಸಾಗಾಟದ ಲಾರಿಯನ್ನು ಸ್ಥಳೀಯರು ತಡೆ ಹಿಡಿದ ಘಟನೆ ಜೂ.20ರಂದು ನೆಕ್ಕಿಲಾಡಿಯಲ್ಲಿ ನಡೆದಿದೆ.
34 ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ-ದರ್ಬೆ ಜಿ.ಪಂ.ರಸ್ತೆಯಲ್ಲಿ ಮರಳು ಸಾಗಾಟದ ಲಾರಿ ಸಂಚರಿಸುತ್ತಿರುವುದರಿಂದ ರಸ್ತೆ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಲಾರಿ ತಡೆ ಹಿಡಿದರು. ಸ್ಥಳೀಯ ಗ್ರಾ.ಪಂ.ಸದಸ್ಯ ಹರೀಶ್, ಗಣೇಶ್ ನಾಯಕ್, ಗೋಪಾಲ, ರವಿ ಮುಂತಾದವರು ಲಾರಿ ತಡೆ ಹಿಡಿದರು. ಬಳಿಕ ಗ್ರಾ.ಪಂ‌.ಅಧ್ಯಕ್ಷ ಪ್ರಶಾಂತ್ ಎನ್.‌ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ರಸ್ತೆಯನ್ನು ತಕ್ಷಣವೇ ಸರಿ ಪಡಿಸಿಕೊಡಲಾಗುವುದು ಎಂದು ಲಾರಿಯವರು ತಿಳಿಸಿದರಲ್ಲದೆ ಜೆಸಿಬಿ ತರಿಸಿ ರಸ್ತೆ ದುರಸ್ತಿ ಆರಂಭಿಸಿದರು.‌ ಎರಡು ತಿಂಗಳೊಳಗೆ ರಸ್ತೆಯನ್ನು ಶಾಶ್ವತವಾಗಿ ಸರಿ ಪಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಲಾರಿಯನ್ನು ಬಿಡಲಾಯಿತು.

LEAVE A REPLY

Please enter your comment!
Please enter your name here