- ಅಧ್ಯಕ್ಷ: ಅಧ್ಯಕ್ಷ: ಚನಿಯಪ್ಪ ನಾಯ್ಕ, ಉಪಾಧ್ಯಕ್ಷ :ಜಗದೀಶ್
ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢ ಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ 2022-23ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚನಿಯಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಜಗದೀಶ್, ಖಜಾಂಜಿಗಳಾಗಿ ಲಕ್ಷ್ಮಣ ಗೌಡ ಪಟ್ಲ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಕೃಷ್ಣವೇಣಿ ಎಸ್, ಸದಸ್ಯರುಗಳಾಗಿ ಅಣ್ಣಯ್ಯ ಗೌಡ, ವಂಸತಿ, ದಮಯಂತಿ, ಹರಿಣಾಕ್ಷಿ, ಶುಭವತಿ, ದೇವಕಿ, ಯಶೋಧರವರುಗಳನ್ನು ಆಯ್ಕೆ ಮಾಡಲಾಯಿತು.