ಪುತ್ತೂರು: ತಿಂಗಳಾಡಿ ದರ್ಬೆ ಅಂಗನವಾಡಿ ಕೇಂದ್ರದಲ್ಲಿರುವ ನೀರಿನ ಟ್ಯಾಂಕ್ ದುಸ್ಥಿತಿಯಲ್ಲಿ ಇರುವುದನ್ನು ಮನಗಂಡು 500 ಲೀಟರ್ ನೀರಿನ ಟ್ಯಾಂಕ್ ನ್ನು ಸರ್ವೆ ಕಾಂಗ್ರೆಸ್ ಬೂತ್ -193 ವತಿಯಿಂದ ಕೊಡುಗೆಯಾಗಿ ನೀಡಲಾಯಿತು.
ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಮಜೀದ್ ಬಾಳಾಯ ಟ್ಯಾಂಕ್ ಹಸ್ತಾಂತರಿಸಿದರು. ಅಂಗನವಾಡಿ ಶಿಕ್ಷಕಿ ಸುಲೋಚನಾ ಟ್ಯಾಂಕ್ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಸದಸ್ಯ ರಾಮಚಂದ್ರ ಸೊರಕೆ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು, ಸಂಜೀವ ನಾಯ್ಕ್ ಸೊರಕೆ , ಹಾಗು ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಉಪಸ್ಥಿತರಿದ್ದರು.