ಪುಣ್ಚತ್ತಾರು ಬೊಬ್ಬೆಕೇರಿ- ರಾಜ್ಯ ಹೆದ್ದಾರಿ ರಸ್ತೆ ಬದಿ ಕುಸಿತ- ರಸ್ತೆ ಸಂಪರ್ಕ ಕಡಿತ ಭೀತಿ

0

ಕಾಣಿಯೂರು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪುತ್ತೂರು- ಕಾಣಿಯೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುಣ್ಚತ್ತಾರು ಸಮೀಪ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಬದಿ ಕುಸಿತಗೊಂಡಿದ್ದು, ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಈ ರಸ್ತೆ ಮೂಲಕ ಅದೆಷ್ಟೋ ವಾಹನಗಳು ಸಂಚರಿಸುತ್ತಿದ್ದು, ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪುಣ್ಚತ್ತಾರು ರಸ್ತೆಗೆ ಧುಮುಕಿದ ನೀರು..

ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ನೀರಿನ ಪ್ರವಾಹ ಹೆಚ್ಚಾಗಿದ್ದು, ಪುತ್ತೂರು- ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪ ಪುಣ್ಚತ್ತಾರು ಎಂಬಲ್ಲಿ ರಸ್ತೆಗೆ ನೀರು ನುಗ್ಗಿದೆ. ಪಕ್ಕದಲ್ಲಿ ಹರಿಯುವ ಹೊಳೆಯ ನೀರು ರಸ್ತೆಗೆ ನುಗ್ಗಿದ ಕಾರಣ ರಸ್ತೆ ಸಂಚಾರ ಅಡಚಣೆಯಾಗಿತ್ತು. ತೋಟಗಳಿಗೂ ನದಿ ನೀರು ನುಗ್ಗಿದೆ.

LEAVE A REPLY

Please enter your comment!
Please enter your name here