ಪುತ್ತೂರು : ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿಯ ನೂತನ ಕಡಬ ಶಾಖೆಯ ಉದ್ಘಾಟನಾ ಸಮಾರಂಭ ಜು.9ರಂದು ಬೆಳಿಗ್ಗೆ 11.30ಕ್ಕೆ ಕಡಬ ಶ್ರೀದೇವಿ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ನಡೆಯಲಿದೆ.
ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಡಬ ಸಂತ ಜೋಕಿಮರ ದೇವಾಲಯದ ಧರ್ಮಗುರು ಅರುಣ್ ವಿಲ್ಸನ್ ಲೋಬೋ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಡಬ ಶ್ರೀದೇವಿ ಸಂಕೀರ್ಣದ ಮಾಲಕ ರಾಮಚಂದ್ರ ಕೆ., ಕಡಬ ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ವಿಭಾಗದ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ಅಬೆಲ್ ಲೋಬೊ, ಪುತ್ತೂರು ಹಾಗೂ ಕಡಬ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಽಕಾರಿ ನವೀನ್ ಭಂಡಾರಿ, ಮರ್ದಾಳ ಕಡಬದ ಸಂತ ಮೇರಿ ಸಿರಿಯನ್ ಆರ್ಥೋಡೊಕ್ಸ್ ಚರ್ಚ್ನ ಧರ್ಮಗುರು ಮ್ಯಾಥ್ಯು ಜೋನ್, ಜಿ.ಪಂ.ಮಾಜಿ ಸದಸ್ಯರುಗಳಾದ ಪಿ.ಪಿ.ವರ್ಗೀಸ್, ಸೈಯದ್ ಮೀರಾ ಸಾಹೇಬ್, ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿ ಹನೀಫ್ ಕೆ. ಭಾಗವಹಿಸಲಿದ್ದಾರೆ ಎಂದು ಸಹಕಾರಿಯ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್, ಉಪಾದ್ಯಕ್ಷ ಜೆರೊಂ ಬ್ರ್ಯಾಗ್ಸ್ ಹಾಗೂ ಶಾಖಾಽಕಾರಿ ಸಿಜ ಟಿ. ತಿಳಿಸಿದ್ದಾರೆ.