ಮುಂಡೂರು: ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ಚರಂಡಿ ದುರಸ್ತಿ ಶ್ರಮದಾನ

0

ಪುತ್ತೂರು: ಹಲವಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮುಂಡೂರು ಗ್ರಾಮದ ದಂಡೆನಕುಕ್ಕು ಎಂಬಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ರಸ್ತೆಯಲ್ಲಿ ಹರಿದು ಆ ಪರಿಸರದ ಕೆಲವು ಮನೆಗಳಿಗೆ ನುಗ್ಗುತ್ತಿರುವ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾದ ಎಸ್‌ಡಿಪಿಐ ಕುರಿಯ ಬೂತ್ ಸಮಿತಿಯ ಕಾರ್ಯಕರ್ತರು ಬುಲ್ಡೋಜರ್ ಮೂಲಕ ಶ್ರಮದಾನ ನಡೆಸಿ ಚರಂಡಿಯನ್ನು ಸರಿಪಡಿಸಿದರು. ಆರ್ಯಾಪು ಗ್ರಾ.ಪಂ ಸದಸ್ಯ ನಾಗೇಶ್ ಕುರಿಯ, ಎಸ್‌ಡಿಪಿಐ ಕಾರ್ಯಕರ್ತರಾದ ಅಶ್ರಫ್ ಕುರಿಯ, ನಿಝಾಮ್ ಕೋಲಾಡಿ, ಆಸಿಫ್ ಪಂಜಳ, ಝೈದ್ ಬೊಳ್ಳಗುಡ್ಡೆ, ಶಾಕಿರ್ ಮುಂಡೂರು ಮತ್ತಿತ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here