ಪುತ್ತೂರು: ಸತತ ಮೂರು ಸೂಪರ್ ಹಿಟ್ ಕಿರುಚಿತ್ರಗಳನ್ನು ನೀಡಿದ ನಿತಿನ್ ರೈ ಕುಕ್ಕುವಳ್ಳಿಯವರು ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈಗ ಫ್ಯಾಮಿಲಿ ಕಥೆ, ಸಸ್ಪೆನ್ಸ್, ರೋಚಕ ತಿರುವುಗಳನ್ನು ಹೊಂದಿರುವ `ಪರಿಣಿತ’ ಕಿರುಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದೆ. ಕಿರುಚಿತ್ರ ಲೋಕದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ `ಧರ್ಮದೈವ’ ಭಾಗ ಒಂದು ಮತ್ತು ಭಾಗ-2 ನಿರ್ದೇಶನದ ಯಶಸ್ವಿನ ಬಳಿಕ `ಆಕೆ ಮೋಹಿನಿ…’ ಎನ್ನುವ ಹಾರರ್ ಸಸ್ಪೆನ್ಸ್ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದು ಕೂಡ ಹಿಟ್ ಆಗಿದ್ದು ಆ ಬಳಿಕ `ಪರಿಣಿತ’ ಎಂಬ ಫ್ಯಾಮಿಲಿ ಕಥೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಚಿತ್ರೀಕರಣವು ಅರಿಯಡ್ಕ ಕುತ್ಯಾಡಿ ಅಜಿತ್ ಭಂಡಾರಿಯವರ ಶ್ರೀಕಾರಂ ಮನೆ ಹಾಗೂ ಸುತ್ತಮುತ್ತ ನಡೆದಿದೆ.
ರಿದ್ವಿ ಕ್ರಿಯೇಷನ್ನಲ್ಲಿ ಮೂಡಿಬಂದಿರುವ ಚಿತ್ರವನ್ನು ಸುಧೀರ್ ಕುಮಾರ್ ಎಮ್ ಮತ್ತು ಕವಿತಾ ಸುಧೀರ್ ಕುಮಾರ್ ನಿರ್ಮಾಣ, ನಿತಿನ್ ರೈ ಕುಕ್ಕುವಳ್ಳಿಯವರ ಕಥೆ, ಪರಿಕಲ್ಪನೆ ಹಾಗೂ ನಿರ್ದೇಶನ, ಹಮೀದ್ ಪುತ್ತೂರು ಸಂಭಾಷಣೆ ಹಾಗು ಚಿತ್ರಕಥೆ ಬರೆದಿದ್ದಾರೆ. ಸುಧಾಕರ್ ಪಡೀಲ್ರವರ ನಿರ್ವಹಣೆ, ಧನು ಛಾಯಾಗ್ರಹಣ, ಕಿಶೋರ್ ನೆಕ್ಕಿಲಾಡಿ ಪ್ರಸಾದನ,ದೀಕ್ಷಾ ಪರಿವಾರ್ ಸಹ ನಿರ್ದೇಶನ, ಅಶ್ವಿನ್ ಸಂಗೀತ, ಕೌಶಿಕ್ ರೈ ತೋಟ, ಮಂಜುನಾಥ್ ರೈ ಬಲ್ಪ ನಿರ್ವಹಣ ಸಹಕಾರ, ಅಶ್ವಿನಿ ಪೆರುವಾಯಿಯವರ ಹಿನ್ನೆಲೆ ಧ್ವನಿ, ನಿತಿನ್ ಕಾನಾವು ಟೈಟಲ್ ಡಿಸೈನ್, ರಾಧೇಶ್ ರೈ ಮೊಡಪ್ಪಾಡಿಯವರ ಸಂಕಲನ ಮತ್ತು ಧ್ವನಿಗ್ರಹಣ ಚಿತ್ರಕ್ಕಿದೆ.
ಚಿತ್ರದಲ್ಲಿ ಅಕ್ಷಯ್ ರೈ, ಸುಂದರ ರೈ ಮಂದಾರ, ಸುರಕ್ಷಾ ಭಂಡಾರಿ, ಸಿಶೇ ಕಜೆಮಾರ್, ಕೌಶಿಕ್ ರೈ ಕುಂಜಾಡಿ, ಆರ್.ಪಿ ಕೌಡಿಚ್ಚಾರು, ಸುಧಾಕರ್ ಪಡೀಲ್ ನಟಿಸಿದ್ದಾರೆ.