ಪುತ್ತೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭೀಕರ ಗಾಳಿ ಮಳೆಗೆ ಸುಳ್ಯ ತಾಲೂಕಿನ ಪಂಜಿಗಾರು ಸಮೀಪದ ರಾಮಕುಮೇರಿನ ರೇವತಿ ಎಂಬವರ ಮನೆಗೆ ಬೃಹತ್ ಗಾತ್ರದ ಮರವೊಂದು ಬಿದ್ದು ಅಪಾರ ನಷ್ಟವಾಗಿದೆ. ಇದನ್ನು ಗಮನಿಸಿದ ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ ಪುತ್ತೂರು ಇದರ “ಭಾಲಾವಲೀಕಾರ್ ರಾಜಪುರ ಸಾರಸ್ವತ ಸಹಾಯವಾಣಿ ” ವತಿಯಿಂದ 10,000 ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಸಂಘದ ಆಡಳಿತ ಮಂಡಳಿಯ ಸದಸ್ಯರಾದ ರಮೇಶ್ ಪ್ರಭು ಸಂಪ್ಯ, ಹರಿಪ್ರಸಾದ ಎಂ ಪುಂಡಿಕಾಯಿ, ಚಂದ್ರಶೇಖರ ಭಟ್ ಮುಂಡುಗಾರು, ಗೋಪಾಲಕೃಷ್ಣ ಪ್ರಭು ಕುಂಟುನಿ ಉಪಸ್ಥಿತರಿದ್ದರು.