ಕಾಣಿಯೂರು: ಗೆಳೆಯರ ಬಳಗ ಕೊಡಿಮಾರು ಅಬೀರ ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೊಡಿಮಾರಿನಲ್ಲಿ ಚಾಲನೆ ನೀಡಲಾಯಿತು.
ಕೊಡಿಮಾರು ದೈವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಮೀಳಾ ಜನಾರ್ದನ, ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಗೆಳೆಯರ ಬಳಗದ ಅಧ್ಯಕ್ಷರಾದ ರಂಜಿತ್ ಹೊಸೊಕ್ಲು, ಗೌರವಾಧ್ಯಕ್ಷರಾದ ಪ್ರಮೋದ್ ನೀರಜರಿ, ಕಾರ್ಯದರ್ಶಿ ದೀಕ್ಷಿತ್ ಹೊಸೊಕ್ಲು, ಜನಾರ್ದನ ಆಚಾರ್ಯ ಕಾಣಿಯೂರು, ಸುಂದರ ಗೌಡ ಕಂಡೂರು, ಚಂಪಾ ಅಬೀರ, ರಾಜೀವಿ ಅಬೀರ, ದಿನೇಶ್ ಅಬೀರ, ಪ್ರೀತಮ್, ಮೋಹಿತ್, ಗಗನ್, ಪ್ರಸಿದ್ಧ್, ಮನೀಷ್, ಮನೋಜ್, ಯೋಗಿಶ್, ಗಗನ್, ಸುಷ್ಮಿತಾ, ಅಂಕಿತ, ಪ್ರಣಮ್ಯ, ಅಶ್ವಿ, ಸಾನ್ವಿ ಎ .ಜೆ, ಸಾಕ್ಷಿ ಎ.ಜೆ ಯಶಸ್ವಿನಿ, ತೇಜಸ್ವಿನಿ, ನಿರೀಕ್ಷಾ, ಕೀರ್ತಿ, ನೀಕ್ಷಾ, ಚಿತ್ರಾ, ದನ್ವಿತ್ ಉಪಸ್ಥಿತರಿದ್ದರು.