ಪುತ್ತೂರು: ಲೋಕೋಪಯೋಗಿ ಇಲಾಖೆ ಪುತ್ತೂರು ಉಪವಿಭಾಗದ ಕಚೇರಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಆ.15 ರಂದು ಕಚೇರಿ ಅವರಣದಲ್ಲಿ ನೆರವೇರಿತು.
ಇಲಾಖಾ ಮುಖ್ಯಸ್ಥರು ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ರಾಜಾರಾಮ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಎಲ್ಲಾ ಹಿರಿಯರನ್ನು ನೆನಪಿಸಿಕೊಂಡು ಅವರ ತ್ಯಾಗ ಬಲಿದಾನಗಳ ಬಗ್ಗೆ ವಿವರಿಸಿ, ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರಿದರು.
ಇಲಾಖೆಯ ಸಹಾಯಕ ಎಂಜಿನಿಯರ್ ಕನಿಷ್ಕ ಎಸ್ ಚಂದ್ರ, ಕಿರಿಯ ಇಂಜಿನಿಯರ್ ಗಳಾದ ಎಲ್. ಸಿ. ಸಿಕ್ವೇರಾ, ರವಿಚಂದ್ರ ಐ ವಿ, ಬಾಲಕೃಷ್ಣ ಭಟ್, ಪ್ರಥಮ ದರ್ಜೆ ಸಹಾಯಕರಾದ ರಾಜೇಶ್, ದ್ವಿತೀಯ ದರ್ಜೆ ಸಹಾಯಕರಾದ ಇಂದುಮತಿ, ಪ್ರತೀಕ್ ಎನ್ ಎಸ್. ಸಿಬ್ಬಂದಿಗಳಾದ ಕಾರ್ತಿಕ್, ರಕ್ಷೀತಾ, ಸಂಜೀವ ಪೂಜಾರಿ, ಸುಬ್ಬಪ್ಪ ಮಣಿಯಾಣಿ, ವಿಶ್ವನಾಥ, ವಾಸು ಬಿ, ರವಿ, ಮಂಜುಳಾ ಹಾಗೂ ಗುತ್ತಿಗೆದಾರರಾದ ಗಿರೀಶ್ ಸವಣೂರು, ಅಭಿಮನ್ಯು ಹಾಗೂ ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.