ಪುತ್ತೂರು:ಶ್ರೀ ರಕ್ಷಾ ಹಾಗೂ ಭಕ್ತ ಒಕ್ಕಲಿಗ ಗೌಡ ಸಂಘ ಭಕ್ತಕೋಡಿ ವತಿಯಿಂದ ಆ.14ರಂದು ಭಕ್ತಕೋಡಿ ಜನಾರ್ಧನ ಗೌಡರ ಮನೆಯಲ್ಲಿ ಆಟಿದ ಕೂಟ ಕಾರ್ಯಕ್ರಮ ನಡೆಯಿತು.
ಒಕ್ಕಲಿಗ ಗೌಡ ಸಂಘದ ಸರ್ವೆ ಒಕ್ಕೂಟ ಅಧ್ಯಕ್ಷ ವಸಂತ್ ಬಿ. ಎನ್, ಕಾರ್ಯದರ್ಶಿ ಭವ್ಯ ಕರುಂಬಾರು, ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಭಕ್ತಕೋಡಿ, ಶ್ರೀರಕ್ಷಾ ಸಂಘದ ಅಧ್ಯಕ್ಷೆ ರೋಹಿಣಿ, ಕಾರ್ಯದರ್ಶಿ ಹರ್ಷಾವತಿ ಜನಾರ್ದನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದ ಆಶಾ ಕಾರ್ಯಕರ್ತೆಯಾಗಿರುವ ಶ್ರೀರಕ್ಷಾ ಸಂಘದ ಸದಸ್ಯ ಜಯಶೀಲಾರವರನ್ನು ಸನ್ಮಾನಿಸಲಾಯಿತು. ಭಜನೆ, ವಿವಿಧ ಸ್ಪರ್ಧೆಗಳು ನಡೆದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಜನಾರ್ಧನ ಗೌಡ ಸ್ವಾಗತಿಸಿದರು. ಯಶಸ್ವಿನಿ ಉತ್ತಮ ಹಾಗು ಅಕ್ಷತಾ ಕುಲದೀಪ್ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಗಂಗಾಧರ ಗೌಡರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ತಮ್ಮ ತಮ್ಮ ಮನೆಯಿಂದ ತಯಾರಿಸಿ ತಂದಿದ್ದ ಖಾದ್ಯಗಳೊಂದಿಗೆ ಮಧ್ಯಾಹ್ನದ ಭೋಜನವನ್ನು ಸೇವಿಸಲಾಯಿತು.