ಆತೂರು ಬದ್ರಿಯಾ ಸ್ಕೂಲ್‌ನಲ್ಲಿ ಕಡಬ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

0

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಬದ್ರಿಯಾ ಸ್ಕೂಲ್ ಆತೂರು ಇದರ ಆಶ್ರಯದಲ್ಲಿ ಕಡಬ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಆ. ೧೪ರಂದು ಆತೂರು ಬದ್ರಿಯಾ ಸ್ಕೂಲ್ ಮೈದಾನದಲ್ಲಿ ಜರಗಿತು.ಬದ್ರಿಯಾ ಸ್ಕೂಲ್ ಸಂಚಾಲಕ ಪಿ. ಆದಂ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾಟವನ್ನು ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹೆಚ್. ಅಹ್ಮದ್ ಕುಂಞ ಉದ್ಘಾಟಿಸಿದರು. ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷೆ ಜಯಂತಿ ಬಿ.ಎಸ್., ಶಿಕ್ಷಣ ಸಂಪನ್ಮೂಲ ವ್ಯಕ್ತಿ ಮಹೇಶ್ ಸಂದರ್ಭೋಚಿತವಾಗಿ ಮಾತನಾಡಿದರು.

ಸಮಾರಂಭದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಎನ್.ಎ. ಇಸಾಕ್, ಎನ್. ಪೊಡಿಕುಂಞ ನೀರಾಜೆ, ಕಾರ‍್ಯದರ್ಶಿ ಸಿರಾಜ್ ಬಡ್ಡಮೆ, ನಿರ್ದೇಶಕ ಕೆ.ಎ. ಸುಲೈಮಾನ್, ನಝೀರ್ ಕೆ., ಹಮೀದ್ ದಾರಿಮಿ, ಬಿ.ಆರ್. ಅಬ್ದುಲ್ ಖಾದರ್, ಎ. ಇಬ್ರಾಹಿಂ, ಹಂಝ ಸಖಾಫಿ ಉಪಸ್ಥಿತರಿದ್ದರು. ಶಾಲಾ ಪ್ರಿನ್ಸಿಪಾಲ್ ಮಲ್ಲಿಕಾ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಅನಿತಾ ವಂದಿಸಿದರು. ಯಾಹ್ಯ ಕಾರ‍್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here