ಹೊಸಮಠ ಪ್ರಾ.ಕೃ.ಪ.ಸಹಕಾರ ಸಂಘದ ಅದ್ವಿತೀಯ ಸಾಧನೆ- ಕೇಂದ್ರ ಸಹಕಾರಿ ಬ್ಯಾಂಕಿನ ಮಹಾ ಸಭೆಯಲ್ಲಿ ಸನ್ಮಾನ

0

ಕಡಬ: ದಾಖಲೆಯ ಪ್ರಗತಿಯನ್ನು ಸಾಧಿಸಿರುವ ಹೊಸಮಠ ಸಿ.ಎ.ಬ್ಯಾಂಕಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಗೌರವ ಲಭಿಸಿದೆ. ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ ಹಾಗೂ ಸಿ.ಇ.ಒ ಸೋಮಸುಂದರ ಶೆಟ್ಟಿಯವರನ್ನು ಗೌರವಿಸಲಾಗಿದೆ.

ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ೧೦೨ ವರ್ಷಗಳಿಂದ ಹಿರಿಯ ಸಹಕಾರಿಗಳ ಮಾರ್ಗದರ್ಶನದಿಂದ, ಇತರ ಬ್ಯಾಂಕ್ ಗಳ ಸ್ಪರ್ಧಾತ್ಮಕ ಪೈಪೋಟಿ ಇದ್ದರೂ ಸಂಘದ ಸದಸ್ಯರೆಲ್ಲರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಾ ದಾಖಲೆಯ ಪ್ರಗತಿಯನ್ನು ಸಾಧಿಸಿದೆ. ಸಂಘದ ಈ ಸಾಧನೆಗಾಗಿ ಆ.೦೫ರಂದು ನಡೆದ ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಶಶಾಂಕ್ ಗೋಖಲೆ ಎಂ, ನಿರ್ದೇಶಕರಾದ ಜಯಚಂದ್ರ ರೈ ರವರು ಉಪಸ್ಥಿತರಿದ್ದರು.

ದಾಖಲೆಯ ಪ್ರಗತಿ

ಸಂಘವು ರೂ ೧೨.೧೯ ಕೋಟಿ ಠೇವಣಿ ಮತ್ತು ರೂ೪.೮೨ ಕೋಟಿ ಪಾಲು ಬಂಡವಾಳವನ್ನು ಹೊಂದಿದ್ದು, ೪೦.೦೪ಕೋಟಿ ಸಾಲ ವಿತರಿಸಿದ್ದು ವರ್ಷಾಂತ್ಯಕ್ಕೆ ರೂ ೪೧.೧೦ ಕೋಟಿ ಸಾಲ ಹೊರಬಾಕಿ ಇದ್ದು, ಶೇ ೯೫.೬೮ ಸಾಲ ಮರುಪಾವತಿಯಾಗಿರುತ್ತದೆ ಹಾಗೂ ಒಟ್ಟು ೨೦೦.೨೨ ಕೋಟಿಗಳಷ್ಟು ವ್ಯವಹಾರವನ್ನು ಮಾಡಲಾಗಿದೆ. ಸಂಘವು ಕಳೆದ ಹನ್ನೇರಡು ವರ್ಷಗಳಿಂದ ಲಾಭದಲ್ಲಿದ್ದು, ಹತ್ತು ವರ್ಷಗಳಿಂದ “ಎ” ಆಡಿಟ್ ವರ್ಗೀಕರಣವನ್ನು ಪಡೆದು ಈ ವರ್ಷ ದಾಖಲೆಯ ರೂ ೧.೧೬ ಕೋಟಿ ಲಾಭ ಗಳಿಸಿರುತ್ತದೆ. ಮಹಾಸಭೆಯಲ್ಲಿ ಅಧ್ಯಕ್ಷರು ಸದಸ್ಯರಿಗೆ ದಾಖಲೆಯ ಶೇ.೧೨.೫ ಡಿವಿಡೆಂಡ್ ಘೋಷಣೆ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here