- ಸಾರ್ವಜನಿಕರ ಮಾಹಿತಿಯಂತೆ ಸಂಪ್ಯ ಪೊಲೀಸರಿಂದ ವಿಚಾರಣೆ
- ಮಾದಕ ದ್ರವ್ಯ ಸೇವನೆ ಅನುಮಾನ – ಚಾಲಕನ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಪೊಲೀಸರು
ಪುತ್ತೂರು: ಕೆಯ್ಯೂರು ಎರಕ್ಕಳ ಎಂಬಲ್ಲಿ ಆಂಧ್ರಪ್ರದೇಶದ ನೋಂದಣಿಯ ಕಾರೊಂದು ಅನುಮಾನಸ್ಪದವಾಗಿ ಓಡಾಡುತ್ತಿದೆ ಎಂಬ ಸಾರ್ವಜನಿಕರ ಮಾಹಿತಿಯಂತೆ ಸಂಪ್ಯ ಪೊಲೀಸರು ಕಾರು ಚಾಲಕನನ್ನು ವಿಚಾರಿಸಿದ ಮತ್ತು ಚಾಲಕ ಮಾದಕ ದ್ರವ್ಯ ಸೇವನೆ ಮಾಡಿರುವ ಶಂಕೆಯಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಘಟನೆ ನಡೆದಿದೆ.
ಪುತ್ತೂರು ಮೂಲದ ಕಾರು ಚಾಲಕನ ಹೇಳಿಕೆಯಂತೆ ಸವಣೂರು ಕಡೆ ಸಂಬಂಧಿಕರ ಮನೆಗೆ ಬರುತ್ತಿದ್ದ ವೇಳೆ ತನ್ನ ತಾಯಿಯ ಮೊಬೈಲ್ ದಾರಿ ಮಧ್ಯೆ ಕಳೆದು ಹೋಗಿದೆ. ಅದನ್ನು ಹುಡುಕಾಡಿಕೊಂಡು ಕೆಯ್ಯೂರು ಕಡೆ ಬಂದಿದ್ದೆ. ಆದರೆ ಫೋನ್ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದೆ. ರಾತ್ರಿ ವೇಳೆ ಯುವಕರೊಬ್ಬರಿಗೆ ಕಳೆದು ಹೋದ ಮೊಬೈಲ್ ಸಿಕ್ಕಿದ್ದು, ಅದನ್ನು ಅವರು ಆನ್ ಮಾಡಿದಾಗ ಮೊಬೈಲ್ ಎರಕ್ಕಳ ಸಮೀಪ ಇರುವ ಮಾಹಿತಿಯಂತೆ ಬಂದಿದ್ದೆ ಎಂದು ಕಾರು ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಚಾಲಕ ಮಾದಕ ವಸ್ತು ಸೇವನೆ ಮಾಡಿರುವ ಸಂಶಯದ ಮೇರೆಗೆ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.