ಕೊಯಿಲ: ಅರಣ್ಯ ಇಲಾಖೆ ಅಧಿಕಾರಿಗಳ ತಂಡದ ಕಾರ್‍ಯಾಚರಣೆ ; ಮನೆಯೊಳಗೆ ಅಕ್ರಮ ಮರ ದಾಸ್ತಾನು ಪತ್ತೆ, ಕೇಸು ದಾಖಲು

0

  • ಹೆಬ್ಬಲಸು ಜಾತಿಯ 15 ಸೈಜ್ ಮರ ವಶಕ್ಕೆ
  • ಆರೋಪಿ ಗಂಡಿಬಾಗಿಲು ನಿವಾಸಿ ಹಾರಿಸ್ ಬಂಧನ

ಉಪ್ಪಿನಂಗಡಿ: ಕೊಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಮನೆಯೊಳಗೆ ಅಕ್ರಮವಾಗಿ ಹೆಬ್ಬಲಸು ಮರಗಳನ್ನು ದಾಸ್ತಾನು ಇರಿಸಿದ್ದ ಪ್ರಕರಣವನ್ನು ಪುತ್ತೂರು ವಲಯ ಅರಣ್ಯ ಇಲಾಖಾ ಅಧಿಕಾರಿಗಳ ತಂಡ ಪತ್ತೆ ಹಚ್ಚಿ, ಮರವನ್ನು ವಶಕ್ಕೆ ಪಡೆದುಕಂಡು ಪ್ರಕರಣ ದಾಖಲಿಸಿದೆ. ಕೊಯಿಲ ಗ್ರಾಮದ ಗಂಡಿಬಾಗಿಲು ಜನತಾ ಕಾಲೋನಿ ನಿವಾಸಿ ಹಾರಿಸ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಮರದ ಸೈಜ್‌ಗಳನ್ನಾಗಿ ಮಾಡಿ ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ಮೇರೆಗೆ ಪುತ್ತೂರು ಸಹಾಯಕ ಅರಣ್ಯಾಧಿಕಾರಿ ಮಾರ್ಗದರ್ಶನದಲ್ಲಿ ಕಾರ್‍ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮನೆಯೊಳಗೆ ಇದ್ದ ಹೆಬ್ಬಲಸು ಜಾತಿಯ ೧೫ ಸೈಜ್ ಮರಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಬಂಧನ, ಬಿಡುಗಡೆ:
ಆರೋಪಿ ಹಾರಿಸ್ ಮನೆಯಿಂದ ಸುಮಾರು ೪೦ ಸಾವಿರ ರೂಪಾಯಿ ಮೌಲ್ಯದ ಮರದ ಸೈಜ್‌ಗಳನ್ನು ವಶಕ್ಕೆ ಪಡೆದುಕೊಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ತಿಸಿದ್ದಾರೆ.

LEAVE A REPLY

Please enter your comment!
Please enter your name here