- ಕಾರು ಚಾಲಕನ ವರ್ತನೆಗೆ ವೈದ್ಯಕೀಯ ಪರೀಕ್ಷೆ
- ಮಾದಕ ವಸ್ತು ಸೇವನೆ ದೃಢ – ಪ್ರಕರಣ ದಾಖಲು
ಪುತ್ತೂರು: ಕೆಯ್ಯೂರು ಎರಕ್ಕಳ ಎಂಬಲ್ಲಿ ಆಂಧ್ರಪ್ರದೇಶದ ನೋಂದಣಿಯ ಸ್ಕೋರ್ಪಿಯೊ ಕಾರೊಂದು ಅನುಮಾನಸ್ಪದವಾಗಿ ಓಡಾಡುತ್ತಿದೆ ಎಂಬ ಸಾರ್ವಜನಿಕರ ಮಾಹಿತಿಯಂತೆ ಸಂಪ್ಯ ಪೊಲೀಸರು ಕಾರು ಚಾಲಕನನ್ನು ವಿಚಾರಿಸಿದ ಮತ್ತು ಚಾಲಕ ಮಾದಕ ದ್ರವ್ಯ ಸೇವನೆ ಮಾಡಿರುವ ಶಂಕೆಯಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಘಟನೆ ನಡೆದಿದ್ದು, ಇದೀಗ ಕಾರು ಚಾಲಕ ಮಾದಕ ವಸ್ತು ಸೇವೆ ಮಾಡಿರುವುದಾಗಿ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಡಬ ತಾಲೂಕಿನ ಪೆರಾಬೆ ಕೋಚಕಟ್ಟೆ ನಿವಾಸಿ ಇಬ್ರಾಹಿಂ ಮುಸ್ಲಿಯಾರ್ ಅವರ ಪುತ್ರ ಮುಹಾದ್ ಪ್ರಾಯ ( 30ವ) ಅವರು ಮಾದಕ ವಸ್ತು ಗಾಂಜಾ ಸೇವಿಸಿರುವುದಾಗಿ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿದ್ದು. ಆರೋಪಿ ವಿರುದ್ದ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.